Scientists – Current Affairs Kannada https://currentaffairskannada.com Current Affairs Kannada Wed, 23 Jun 2021 06:40:35 +0000 en-US hourly 1 https://wordpress.org/?v=6.7.2 https://currentaffairskannada.com/wp-content/uploads/2025/03/cropped-CAS-Kannada-Logo-PNG-1-32x32.png Scientists – Current Affairs Kannada https://currentaffairskannada.com 32 32 ಮಾನವನ ಅಸ್ಥಿಪಂಜರ https://currentaffairskannada.com/%e0%b2%ae%e0%b2%be%e0%b2%a8%e0%b2%b5%e0%b2%a8-%e0%b2%85%e0%b2%b8%e0%b3%8d%e0%b2%a5%e0%b2%bf%e0%b2%aa%e0%b2%82%e0%b2%9c%e0%b2%b0/ Wed, 23 Jun 2021 06:40:35 +0000 http://www.spardhatimes.com/?p=2602 • ಮೂಳೆ :      ಮಾನವ ದೇಹದ ಗಟ್ಟಿಯಾದ ರಚನೆಯೇ ಮೂಳೆ. ಹಲ್ಲಿನ “ಎನಾಮೆಲ್” ಪದರವನ್ನು ಹೊರತುಪಡಿಸಿದರೆ ನಂತರದ ಗಟ್ಟಿಯಾದ ರಚನೆಯಾಗಿದೆ. ನಮ್ಮ ದೇಹದ ಒಟ್ಟಾರೆ

The post ಮಾನವನ ಅಸ್ಥಿಪಂಜರ appeared first on Current Affairs Kannada.

]]>
• ಮೂಳೆ :      ಮಾನವ ದೇಹದ ಗಟ್ಟಿಯಾದ ರಚನೆಯೇ ಮೂಳೆ. ಹಲ್ಲಿನ “ಎನಾಮೆಲ್” ಪದರವನ್ನು ಹೊರತುಪಡಿಸಿದರೆ ನಂತರದ ಗಟ್ಟಿಯಾದ ರಚನೆಯಾಗಿದೆ. ನಮ್ಮ ದೇಹದ ಒಟ್ಟಾರೆ ತೂಕದ ಹೆಚ್ಚಿನ ಭಾಗ ಮೂಲೆಗಳಿಂದಾಗಿದೆ. ಮೂಳೆ ದೇಹಕ್ಕೆ ಆಧಾರ, ಅಕಾರ, ರಕ್ಷಣೆ ನೀಡುವುದಲ್ಲದೆ ಚಲನೆಯಲ್ಲಿ ಸಕ್ರಿಯವಾಗಿ ಪಾಲ್ಗೋಳ್ಳುತ್ತದೆ. ಮತ್ತು ಕೆಲವು ಜೈವಿಕ ಕ್ರಿಯೆಗಳಲ್ಲಿ ಸಹ ಮುಖ್ಯ ಪಾತ್ರವಹಿಸುತ್ತವೆ. ಮೂಳೆ
ಅಂಗಾಂಶದ ಮಾತೃಕೆಯು ಕೊಲಾಜನ್ ತಂತುಗಳು, ಪ್ರೋಟಿನ್‍ಗಳು, ಕ್ಯಾಲ್ಸಿಯಂ ಫಾಸ್ಫೇಟ್, ಸೋಡಿಯಂ ಮತ್ತು ಮೆಗ್ನೀಷಿಯಂಗಳ ಕ್ಲೋರ್ಯಡ್‍ಗಳು ಮುಂತಾದ ಲವಣಗಳಿಂದ ಕೂಡಿದೆ.

• ಮಾನವನ ಅಸ್ಥಿಪಂಜರ :

ಮಾನವನ ದೇಹದಲ್ಲಿರುವ ಎಲ್ಲಾ ಮೂಳೆಗಳ ಒಟ್ಟು ಜೋಡಣೆಯೇ ಅಸ್ಥಿಪಂಜರ. ಇದು ಅನೇಕ ಮೂಳೆಗಳಿಂದಾಗಿದೆ. ಪ್ರೌಡಮಾನವನ ದೇಹದಲ್ಲಿ ಒಟ್ಟು 206 ಕ್ಕಿಂತಲೂ ಹೆಚ್ಚಿನ ಮೂಳೆಗಳಿವೆ. ಇವುಗಳ ಪೈಕಿ ಕೆಲವೊಂದು ಮೂಳೆಗಳು ಒಂದರಲ್ಲಿ ಒಂದು ಸೇರ್ಪಡೆಯಾಗಿ ಸ್ಪಷ್ಟವಾಗಿ ಗೋಚರವಾಗುವುದಿಲ್ಲ. ಕೆಲವೊಂದು ಮೂಳೆಗಳು ಬಿಬಿಡಿಯಾಗಿ ಸ್ಪಷ್ಟವಾಗಿ ಗೋಚರವಾಗುತ್ತದೆ.

 

• ಮೂಳೆಗಳ ಬೆಳವಣಿಗೆ:      ಮೂಳೆಗಳ ಬೆಳವಣಿಗೆಯು ಭ್ರೂಣವು ಗರ್ಭದಲ್ಲಿದ್ದಾಗಲೇ ಪ್ರಾರಂಭವಾಗುತ್ತದೆ. ಭ್ರೂಣದಲ್ಲಿ ಮೊದಲು ಮೂಳೆಗಳ ಬದಲು ಮೃದ್ವಸ್ಥಿ ಇರುತ್ತದೆ. ಕಾಲ ಕಳೆದಂತೆ ಮೃದ್ವಸ್ಥಿಗಳ ಸ್ಥಾನವನ್ನು ಮೂಳೆಗಳು ಆಕ್ರಮಿಸಿಕೊಳ್ಳುತ್ತವೆ. ಅಂದರೆ ಮೃದ್ವಸ್ಥಿಗಳಲ್ಲಿ ಲವಣಗಳು ಸೇರ್ಪಡೆಯಾಗುತ್ತಾ ಮೂಳೆಗಳಾಗಿ ಬದಲಾಗುತ್ತವೆ. ಜನನದ ನಂತರವು ಸಹ ಕೆಲವು ವರ್ಷಗಳ ಕಾಲ ಇದು ಮುಂದುವರೆಯುತ್ತವೆ.

 

•  ಅಸ್ಥಿಪಂಜರದ ಕಾರ್ಯ:                                                                                                                                                 ಮಾನವನ ಅಸ್ಥಿಪಂಜರವು ಬಹುಮುಖ್ಯವಾದ ಆರು ಕಾರ್ಯಗಳನ್ನು ನಿರ್ವಹಿಸುತ್ತವೆ.

ಎ. ಆಧಾರ : ಮಾನವನ ಅಸ್ಥಿಪಂಜರವು ಎಲ್ಲಾ ಅಂಗಗಳಿಗೆ ಆಧಾರ ಚೌಕಟ್ಟನ್ನು ಒದಗಿಸುತ್ತವೆ. ಸ್ನಾಯುಗಳು ಮೂಳೆಗಳಿಗೆ ಅಂಟಿಕೊಳ್ಳಲು ಒಳಾಂಗಗಳಿಗೆ ಆಧಾರವನ್ನು ಇದೇ ಕೊಡುತ್ತದೆ. ಅಷ್ಟೇ ಅಲ್ಲದೇ ದೇಹಕ್ಕೆ ಆಕಾರವನ್ನು ಸಹ ನೀಡುತ್ತದೆ.

ಬಿ. ಚಲನೆ : ಇದು ಚಲನೆಯನ್ನು ಉಂಟುಮಾಡುವ ಅಂಗಾಂಶ ಕೈ- ಕಾಲಿನ ಮೂಳೆಗಳ ಚಲನೆಯ ಸಹಾಯದಿಂದ ಚಲಿಸಲು ಸಾಧ್ಯವಾಗುತ್ತದೆ.

ಸಿ. ರಕ್ಷಣೆ : ಅಸ್ಥಿಪಂಜರದ ಕಾರ್ಯಗಳ ಪೈಕಿ ಅತಿ ಪ್ರಮುಖವಾದ ಕಾರ್ಯ ರಕ್ಷಣೆ. ಅಸ್ಥಿಪಂಜರವು ದೇಹದ ವಿವಿಧ ಅಂಗಗಳಿಗೆ ರಕ್ಷಣೆಯನ್ನು ಒದಗಿಸುತ್ತದೆ.

1. ತಲೆಬುರುಡೆಯು ಮೆದುಳು, ಕಣ್ಣು, ಮಧ್ಯಕಿವಿ ಮತ್ತು ಒಳಕಿವಿಗೆ ರಕ್ಷಣೆ ನೀಡುತ್ತದೆ.
2. ಬೆನ್ನುಮೂಳೆಯು ಮೆದುಳು ಬಳ್ಳಿಯನ್ನು ರಕ್ಷಸುತ್ತದೆ.
3. ಎದೆಗೂಡು, ಹೃದಯ ಮತ್ತು ಪುಪ್ಪಸಗಳನ್ನು ರಕ್ಷಿಸುತ್ತದೆ.
4. ಎದೆಮೂಳೆಯೂ ಜೀರ್ಣಾಂಗಗಳು, ವಿಸರ್ಜನಾಂಗಗಳು, ಪ್ರಜನನಾಂಗಗಳನ್ನು ಕಾಪಾಡುತ್ತವೆ.
5. ಭುಜದ ಭಾಗದಲ್ಲಿ ಮೂಳೆಗಳು ಭುಜವನ್ನು ರಕ್ಷಿಸುತ್ತದೆ.
6. ಮೊಣಕಾಲಿನ ಚಿಪ್ಪು ಮೂಳೆಯು ಮೊಣಕಾಲನ್ನು ರಕ್ಷಿಸುತ್ತದೆ

ಡಿ. ರಕ್ತಕಣಗಳ ಉತ್ಪತ್ತಿ :   ರಕ್ತಕಣಗಳಾದ ಕೆಂಪುರಕ್ತಕಣಗಳು, ಬಿಳಿರಕ್ತಕಣಗಳು, ಕಿರುತಟ್ಟೆಗಳು ಉದ್ದವಾದ ಮೂಳೆಗಳ ಮಧ್ಯದಲ್ಲಿ ಕಂಡು ಬರುವ ಅಸ್ಥಿಮಜ್ಜೆಯಲ್ಲಿ ಉತ್ಪತ್ತಿಯಾಗುತ್ತದೆ.

ಇ. ಹಾರ್ಮೋನ್ ಉತ್ಪತ್ತಿ :     ಮೂಳೆಯ ಜೀವಕೋಶಗಳು ಆಸ್ಟಿಯೋಕ್ಯಾಲ್ಸಿನ್ ಎಂಬ ಹಾರ್ಮೋನನ್ನು ಸ್ರವಿಸುತ್ತವೆ. ಇದು ರಕ್ತದಲ್ಲಿರುವ ಗ್ಲೂಕೋಸ್‍ನ ಪ್ರಮಾಣವನ್ನು ನಿಯಂತ್ರಿಸುತ್ತದೆ. ಅಷ್ಟೇ ಅಲ್ಲದೆ ಆಸ್ಟಿಯೋಕ್ಯಾಲಿಸಿನ್ ಇನ್ಸುಲಿನ್‍ನ ಸ್ರವಿಕೆಯನ್ನು ಹೆಚ್ಚಿಸುತ್ತದೆ. ಮತ್ತು ಇನ್ಸುಲಿನ್ ಕ್ರಿಯಾತ್ಮಕತೆಯನ್ನು ಹೆಚ್ಚಿಸುತ್ತದೆ.

 

•  ಮೂಳೆಗಳ ವರ್ಗೀಕರಣ

1. ತಲೆ ಬುರುಡೆ : ತಲೆ ಬುರುಡೆಯು ಅತ್ಯಂತ ಗಟ್ಟಿಯಾದ ಮೂಳೆಗಳಿಂದ ಮಾಡಲ್ಪಟ್ಟಿದೆ. ಇದು ಚಪ್ಪಟೆಯಾದ ಮೂಳೆಗಳನ್ನು ಒಳಗೊಂಡಿದೆ. ತಲೆಬುರುಡೆಯ ಎಲ್ಲಾ ಮೂಳೆಗಳು ಒಂದಕ್ಕೊಂದು ಸೇರಿಕೊಂಡಿವೆ.
ತಲೆಬುರುಡೆಯಲ್ಲಿ ಎರಡು ವಿಧದ ಮೂಳೆಗಳನ್ನು ಕಾಣುತ್ತೇವೆ.
1. ಕಾರ್ನಿಯಲ್ ಬೋನ್ಸ್
2. ಪೇಶಿಯಲ್ ಬೋನ್ಸ್(ಮುಖದ ಮೂಳೆ)
ತಲೆಬುರುಡೆಯ ಮೂಳೆಗಳ ಪೈಕಿ ಚಲಿಸುವ ಏಕೈಕ ಮೂಳೆಯೆಂದರೆ ಕೆಳದವಡೆಯ ಮೂಳೆ . ಇದರಲ್ಲಿ ಕೆಳದವಡೆಯಲ್ಲಿ 16 ಹಲ್ಲುಗಳಿದ್ದು ಇವು ಆಹಾರವನ್ನು ಅಗೆಯಲು ಸಹಾಯಕವಾಗಿದೆ.

2. ಬೆನ್ನು ಮೂಳೆ : ಬೆನ್ನು ಮೂಳೆಯು ದೇಹದ ಹಿಂಭಾಗದಲ್ಲಿ, ಬೆನ್ನಿನ ಭಾಗದಲ್ಲಿ ಇದೆ. ಇದೂ ಸಹ ತಲೆ ಬುರುಡೆಯ ಮೂಳೆಗಳ ರೀತಿಯಲ್ಲಿಯೇ ತುಂಬಾ ಗಟ್ಟಿಯಾಗಿದೆ. ಇದು ಮಿದುಳು ಬಳ್ಳಿಗೆ ರಕ್ಷಣೆ ಒದಗಿಸುತ್ತವೆ.

3. ಭುಜ : ಭುಜವು ಮುಖ್ಯವಾಗಿ ಎರಡು ಮೂಳೆಗಳಿಂದ ಕೂಡಿದೆ.

4. ಕೈಮೂಳೆಗಳು : ತೋಳಿನ ಭಾಗದಲ್ಲಿ ಉದ್ದವಾದ ಮೂಳೆಯಿದೆ. ಇದನ್ನು ‘ಹ್ಯೂಮರಸ್’ ಎನ್ನುವರು. ಮೊಣಕೈ ಹತ್ತಿರ ಈ ಮೂಳೆಗಳು ಕೊನೆಗೊಳ್ಳುತ್ತದೆ. ಇಲ್ಲಿಂದ ಎರಡು ಮೂಳೆಗಳಿದ್ದು ಹೊರಭಾಗಕ್ಕೆ ಇದು ಒಂದೇ ಮೂಳೆಯ ಹಾಗೆ ಕಂಡು ಬರುತ್ತವೆ.

5. ಎದೆಗೂಡು : ಎದೆಯ ಮುಂಭಾಗದಲ್ಲಿರುವ ಗಟ್ಟಿಯಾದ ಉದ್ದವಾದ ಮೂಳೆಯನ್ನು ‘ಸ್ಟರ್ನಮ್” ಎನ್ನುವರು.

6.  ಸೊಂಟದ ಮೂಳೆ : ಸ್ತ್ರೀ ಮತ್ತು ಪುರುಷರ ಅಸ್ಥಿಪಂಜರದಲ್ಲಿ ಪ್ರಮುಖವಾದ ವ್ಯತ್ಯಾಸವು ಇಲ್ಲಿ ಕಂಡುಬರುತ್ತದೆ. ಸ್ತ್ರೀಯರ ಸೊಂಟದ ಮೂಳೆಯ ಮಧ್ಯದಲ್ಲಿ ಒಂದು ರಂಧ್ರವಿದ್ದು ಅಗಲವಾಗಿದೆ. ಏಕೆಂದರೆ ಮಗುವಿನ ಜನನ ಸಂದರ್ಭದಲ್ಲಿ ಮಗುವಿನ ತಲೆಯು ತೂರಿಹೋಗುವಷ್ಟು ಇದು ಅಗಲವಾಗಿದೆ. ಆದರೆ ಪುರುಷರಲ್ಲಿ ಈ ರಂಧ್ರವು ಚಿಕ್ಕದಾಗಿರುತ್ತದೆ.

7. ಕಾಲುಗಳು : ತೊಡೆಯ ಭಾಗದಲ್ಲಿ ನಮ್ಮ ದೇಹದ ಅತ್ಯಂತ ಉದ್ದವಾದ ‘ ಫೀಮರ್’ ಎಂಬ ಮೂಳೆಯಿದೆ. ಇದು ಸೊಂಟದ ಭಾಗದಿಂದ ಮೊಣಕಾಲಿನವರೆಗೂ ವ್ಯಾಪಿಸಿದೆ.

8. ಮಧ್ಯಕಿವಿ :   ನಮ್ಮ ಕಿವಿಯ ಭಾಗವಾದ ಮಧ್ಯಕಿವಿಯಲ್ಲಿ ಮೂರು ಮೂಳೆಗಳಿಂದಾದ ಒಂದು ಸರಪಣಿಯಿದೆ. ಆ ಮುಳೆಗಳನ್ನು ಮ್ಯಾಲಿಯಸ್ ( ಸುತ್ತಿಗೆ ಮೂಳೆ), ಇಂಕಸ್( ಅಡಿಗಲ್ಲು ಮೂಳೆ), ಸ್ಟೇಪಿಸ್ ( ರಿಕಾಪು) ಎನ್ನುವರು. ಈ ಮೂಳೆಗಳ ಪೈಕಿ “ಸ್ಟೇಪಿಸ್” ಎನ್ನುವುದು ನಮ್ಮ ದೇಹದ ಅತ್ಯಂತ ಚಿಕ್ಕ ಮೂಳೆಯಾಗಿದೆ.

 

“ಆಸ್ಟಿಯೊಪೊರೋಸಿಸ್” ಎಂಬುದು ಮೂಳೆಯ ಖನಿಜಾಂಶಗಳ ಸಾಂದರತೆ ಕಡಿಮೆ ಇದ್ದಾಗ ಕಂಡುಬರುವ ಕಾಯಿಲೆಯಾಗಿದೆ. ಇದರಿಂದ ಮೂಳೆ ಮುರಿತದ ಸಾಧ್ಯತೆಯು ಹೆಚ್ಚಾಗುತ್ತದೆ.

‘ಸ್ಕೋಲಿಯೋಸಿಸ್’ ಇದು ಸಂಧಿವಾತದ (ಕೀಲುಗಳ) ಒಂದು ಕಾಯಿಲೆಯಾಗಿದೆ. ಇದು ಒಂದು ಅಥವಾ ಹೆಚ್ಚು ಕೀಲುಗಳ ಊರಿಯೂತವನ್ನು ಒಳಗೊಂಡಿರುತ್ತದೆ.ಸ

The post ಮಾನವನ ಅಸ್ಥಿಪಂಜರ appeared first on Current Affairs Kannada.

]]>
ಮಲೇರಿಯಾ ಸೊಳ್ಳೆಗಳಿಂದ ಹರಡುತ್ತೆ ಎಂದು ತೋರಿಸಿಕೊಟ್ಟ ರೊನಾಲ್ಡ್ ರೋಸ್ https://currentaffairskannada.com/ronald-ross/ Wed, 31 Mar 2021 07:38:05 +0000 https://www.spardhatimes.com/?p=3822 ಮಲೇರಿಯಾ ರೋಗವನ್ನು ಹರಡಲು ಸೊಳ್ಳೆಗಳು ವಾಹಕಗಳಾಗಿವೆ. ಸೊಳ್ಳೆಗಳ ಜೀರ್ಣನಾಳದಲ್ಲಿ ಮಲೇರಿಯಾ ರೋಗಾಣುವಾದ “ಪ್ಲಾಸ್ಮೊಡಿಯಂ”ನ್ನು ಪತ್ತೆ ಹಚ್ಚುವ ಮೂಲಕ ಮಲೇರಿಯಾ ರೋಗವು ಸೊಳ್ಳೆಗಳಿಂದ ಹರಡುತ್ತವೆ ಎಂದು ರೊನಾಲ್ಡ್ ರೋಸ್‍ರವರು

The post ಮಲೇರಿಯಾ ಸೊಳ್ಳೆಗಳಿಂದ ಹರಡುತ್ತೆ ಎಂದು ತೋರಿಸಿಕೊಟ್ಟ ರೊನಾಲ್ಡ್ ರೋಸ್ appeared first on Current Affairs Kannada.

]]>
ಮಲೇರಿಯಾ ರೋಗವನ್ನು ಹರಡಲು ಸೊಳ್ಳೆಗಳು ವಾಹಕಗಳಾಗಿವೆ. ಸೊಳ್ಳೆಗಳ ಜೀರ್ಣನಾಳದಲ್ಲಿ ಮಲೇರಿಯಾ ರೋಗಾಣುವಾದ “ಪ್ಲಾಸ್ಮೊಡಿಯಂ”ನ್ನು ಪತ್ತೆ ಹಚ್ಚುವ ಮೂಲಕ ಮಲೇರಿಯಾ ರೋಗವು ಸೊಳ್ಳೆಗಳಿಂದ ಹರಡುತ್ತವೆ ಎಂದು ರೊನಾಲ್ಡ್ ರೋಸ್‍ರವರು ಜಗತ್ತಿಗೆ ತೋರಿಸಿದರು.

ಇವರ ಈ ಕೊಡುಗೆಗಾಗಿ 1902 ರಲ್ಲಿ ವೈದ್ಯಕೀಯ ವಿಭಾಗದಲ್ಲಿ ನೊಬೆಲ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಮೂಲಕ ವೈದ್ಯಕೀಯ ವಿಭಾಗದಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಎರಡನೇ ವ್ಯಕ್ತಿಯಾಗಿದ್ದಾರೆ. ( 1901 ರಲ್ಲಿ ವೈದ್ಯಕೀಯ ವಿಭಾಗದಲ್ಲಿ ಮೊದಲ ನೊಬೆಲ್ ಪ್ರಶಸ್ತಿ ಪಡೆದವರೆಂಬ ಕೀರ್ತಿಗೆ, ಜರ್ಮನಿ ವೈದ್ಯರಾದ ಎಮಿಲ್ ಅಡಾಲ್ಫ್ ವಾನ್ ಬೆಹರಿಂಗ್‍ರವರಿಗೆ ಸಿರಮ್ ಥೆರಪಿ ಸಂಶೋಧನೆಗಾಗಿ ನೀಡಲಾಯಿತು.).

ಸರ್ ರೊನಾಲ್ಡ್ ರೋಸ್‍ರವರು ಸೊಳ್ಳೆಗಳಿಂದ ಮಲೇರಿಯಾ ರೋಗಾಣು ಹರಡುತ್ತದೆ ಎಂದು ಪತ್ತೆ ಹಚ್ಚಿದರಿಂದ ಮಲೇರಿಯಾ ರೋಗವನ್ನು ನಿಯಂತ್ರಸಲು ಸಾಧ್ಯವಾಯಿತು. ಸರ್, ರೊನಾಲ್ಡ್ ರೋಸ್‍ರವರ ಸಂಶೋಧನೆ ಆಧರಿಸಿ ಇಟಲಿಯನ್ ವೈದ್ಯ ಮತ್ತು ಪ್ರಾಣಿಶಾಸ್ತ್ರಜ್ಞರಾದ ಗಿಯೋವಾನ್ನಿ ಬಾಟಿಸ್ಟಗ್ರಾಸ್ಸಿರವರು ಅನಾಫಿಲಿಸ್ ಎಂಬ ಹೆಣ್ಣು ಸೊಳ್ಳೆಯಿಂದ ಮಾತ್ರ ಮಲೇರಿಯಾ ರೋಗ ಹರಡುತ್ತದೆ. ಎಂದು ಸಂಶೋಧಿಸಿದರು.

ಸರ್.ರೊನಾಲ್ಡ್ ರೋಸ್‍ರವರು ಮೇ 13, 1857 ರಂದು ಪ್ರಸ್ತುತ ಉತ್ತಖಂಡ ರಾಜ್ಯದಲ್ಲಿ ಜನಿಸಿದರು. ಈ ಮೂಲಕ ಅವರು ಭಾರತದ ಮೂಲದವರಾಗಿದ್ದಾರೆ. ಇವರು ತಮ್ಮ ಎಂಟನೇ ವಯಸ್ಸಿನಲ್ಲಿ ಇಂಗ್ಲೆಂಡ್‍ಗೆ ತೆರಳಿ ಅಲ್ಲೇ ನೆಲೆಸಿದರು. ತಮ್ಮ ವಿದ್ಯಾಭ್ಯಾಸವನ್ನು ಇಂಗ್ಲೆಂಡಿನಲ್ಲಿ ಪೂರೈಸಿದರು.

ರೊನಾಲ್ಡ್ ರೋಸ್‍ರವರು 1881 ರಿ0ದ 1894 ರವರೆಗೆ ಭಾರತದಲ್ಲೂ ವೈದ್ಯರಾಗಿ ಸೇವೆ ಸಲ್ಲಿಸಿದರು. ಇವರು ಅನೇಕ ಗ್ರಂಥಗಳನ್ನು ಬರೆದಿದ್ದಾರೆ. ಇವರ ಆತ್ಮಚರಿತ್ರೆ “ ಮೆಮೋರಿಸ್”ನ್ನು 1923 ರಲ್ಲಿ ಬರೆದಿದ್ದಾರೆ. ಸರ್. ರೊನಾಲ್ಡ್ ರೋಸ್‍ರವರು ಆಗಸ್ಟ್ 20, 1897 ರಲ್ಲಿ ಮೊದಲ ಬಾರಿಗೆ ಮಲೇರಿಯಾ ರೋಗವು ಹೆಣ್ನುಸೊಳ್ಳೆಯಿಂದ ಹೆಡುತ್ತದೆ ಎಂದು ಪ್ರಚುರಪಡಿಸಿದರು. ಇದರ ಜ್ಞಾಪಕಾರ್ಥವಾಗಿ ಪ್ರತಿ ಅಗಸ್ಟ್ 20 ರಂದು “ವಿಶ್ವಸೊಳ್ಳೆ ದಿನ ಆಚರಿಸಲಾಗುತ್ತದೆ.

ರೋನಾಲ್ಡ್ ರೋಸ್‍ರವರು 1932 ರಂದು ತಮ್ಮ 75 ನೇ ವಯಸ್ಸಿನಲ್ಲಿ ನಿಧನರಾದರು.ಆದರೆ ಇವರು ವೈದ್ಯಕೀಯ ಲೋಕಕ್ಕೆ ನೀಡಿರುವ ಕೊಡುಗೆ ಅವಿಸ್ಮರಣೀಯ.

The post ಮಲೇರಿಯಾ ಸೊಳ್ಳೆಗಳಿಂದ ಹರಡುತ್ತೆ ಎಂದು ತೋರಿಸಿಕೊಟ್ಟ ರೊನಾಲ್ಡ್ ರೋಸ್ appeared first on Current Affairs Kannada.

]]>
ವಿಜ್ಞಾನಿ ಪರಿಚಯ : ಸರ್ ಐಸಾಕ್ ನ್ಯೂಟನ್ ಎಂಬ ಆಲ್‌ರೌಂಡರ್ ವಿಜ್ಞಾನಿ https://currentaffairskannada.com/sir-isaac-newton/ https://currentaffairskannada.com/sir-isaac-newton/#respond Fri, 18 Dec 2020 06:43:18 +0000 http://www.spardhatimes.com/?p=2436 ಸರ್ ಐಸಾಕ್ ನ್ಯೂಟನ್ ಒಬ್ಬ ಇಂಗ್ಲಿಷ್ ಗಣಿತಜ್ಞ, ಭೌತಶಾಸ್ತ್ರಜ್ಞ, ಖಗೋಳಶಾಸ್ತ್ರಜ್ಞ, ದೇವತಾಶಾಸ್ತ್ರಜ್ಞ ಮತ್ತು ಲೇಖಕ ಮತ್ತು ವ್ಯಾಪಕವಾಗಿ ಗುರುತಿಸಲ್ಪಟ್ಟಿದೆ ಸಾರ್ವಕಾಲಿಕ ಅತ್ಯಂತ ಪ್ರಭಾವಶಾಲಿ ವಿಜ್ಞಾನಿಗಳು ಮತ್ತು ವೈಜ್ಞಾನಿಕ

The post ವಿಜ್ಞಾನಿ ಪರಿಚಯ : ಸರ್ ಐಸಾಕ್ ನ್ಯೂಟನ್ ಎಂಬ ಆಲ್‌ರೌಂಡರ್ ವಿಜ್ಞಾನಿ appeared first on Current Affairs Kannada.

]]>
ಸರ್ ಐಸಾಕ್ ನ್ಯೂಟನ್ ಒಬ್ಬ ಇಂಗ್ಲಿಷ್ ಗಣಿತಜ್ಞ, ಭೌತಶಾಸ್ತ್ರಜ್ಞ, ಖಗೋಳಶಾಸ್ತ್ರಜ್ಞ, ದೇವತಾಶಾಸ್ತ್ರಜ್ಞ ಮತ್ತು ಲೇಖಕ ಮತ್ತು ವ್ಯಾಪಕವಾಗಿ ಗುರುತಿಸಲ್ಪಟ್ಟಿದೆ ಸಾರ್ವಕಾಲಿಕ ಅತ್ಯಂತ ಪ್ರಭಾವಶಾಲಿ ವಿಜ್ಞಾನಿಗಳು ಮತ್ತು ವೈಜ್ಞಾನಿಕ ಕ್ರಾಂತಿಯ ಪ್ರಮುಖ ವ್ಯಕ್ತಿಯಾಗಿದ್ದಾರೆ .

ಲಿಂಕನ್‌ಷೈರ್‌ ಕೌಂಟಿಯ ಒಂದು ಸಣ್ಣ ಹಳ್ಳಿ ವೂಲ್ಸ್‌‌ಥೋರ್ಪ್‌-ಬೈ-ಕೋಲ್‌ಸ್ಟರ್‌ವರ್ತ್‌‌‌ಲ್ಲಿನ ವೂಲ್ಸ್‌‌ಥೋರ್ಪ್‌ ಮೇನರ್‌/ಮ್ಯಾನರ್ ಎಂಬಲ್ಲಿ‌, ಐಸಾಕ್‌ ನ್ಯೂಟನ್‌ರು 4 ಜನವರಿ 1643 [OS: 25 ಡಿಸೆಂಬರ್‌ 1642 ರಂದು ಜನಿಸಿದರು. ನ್ಯೂಟನ್‌ರು ಹುಟ್ಟಿದ ಆ ಸಮಯದಲ್ಲಿ, ಇಂಗ್ಲೆಂಡ್‌ ಗ್ರೆಗೋರಿಯನ್‌ ಪಂಚಾಂಗವನ್ನು ಅಳವಡಿಸಿಕೊಂಡಿರಲಿಲ್ಲ, ಆದ್ದರಿಂದ ಅವರ ಹುಟ್ಟಿದ ದಿನಾಂಕವನ್ನು ಕ್ರಿಸ್‌ಮಸ್‌ ದಿನ, 25 ಡಿಸೆಂಬರ್‌ 1642 ಎಂದು ದಾಖಲಿಸಲಾಗಿತ್ತು.

ಅಲ್ಲಿನ ಶ್ರೀಮಂತ ರೈತ ಐಸಾಕ್‌ ನ್ಯೂಟನ್‌ ಎಂಬುದೇ ಹೆಸರಿನ ತನ್ನ ತಂದೆಯ ಮರಣದ ಮೂರು ತಿಂಗಳ ನಂತರ ನ್ಯೂಟನ್‌ ಹುಟ್ಟಿದರು. ಅಕಾಲಿಕ ಜನನದ ಕಾರಣ, ಆತ ತೀರಾ ಪುಟ್ಟ ಗಾತ್ರದ ಮಗುವಾಗಿದ್ದ, ಆತನ ತಾಯಿ ಹನ್ನಾ ಐಸ್‌ಕಫ್‌ ಹೇಳಿದರೆನ್ನಲಾಗುವ ಹಾಗೆ ಆತ ಕ್ವಾರ್ಟ್‌(ಗ್ಯಾಲನ್ನಿನ ನಾಲ್ಕನೇ ಒಂದು ಭಾಗ ಹಿಡಿಸುವ)  ಲೋಟದೊಳಗೆ ಹಿಡಿಸುತ್ತಿದ್ದ. ಈ ಮಾಹಿತಿಯಿಂದ, ಸುಮಾರು 11ರಿಂದ 15 ವಾರಗಳ ಮುಂಚೆ ಜನಿಸಿದ್ದಿರಬಹುದು ಎಂದು ಅಂದಾಜಿಸಬಹುದಾಗಿದೆ.

1687ರಲ್ಲಿ ಪ್ರಕಟಿಸಿದ ಅವರ ಫಿಲಾಸೊಫೀಸ್‌ ನ್ಯಾಚ್ಯುರಲಿಸ್ ಪ್ರಿನ್ಸಿಪಿಯಾ ಮ್ಯಾಥೆಮೆಟಿಕಾ (ಸಾಮಾನ್ಯವಾಗಿ ಪ್ರಿನ್ಸಿಪಿಯಾ ಎಂದು ಕರೆಯಲ್ಪಡುವ) ಪುಸ್ತಕವು ವಿಜ್ಞಾನದ ಇತಿಹಾಸದಲ್ಲೇ ಬಹು ಪ್ರಭಾವೀ ಪುಸ್ತಕಗಳಲ್ಲಿ ಒಂದಾಗಿದ್ದು ಅಭಿಜಾತ ಯಂತ್ರಶಾಸ್ತ್ರಕ್ಕೆ ಉತ್ತಮ ತಳಪಾಯ ಒದಗಿಸಿಕೊಟ್ಟ ಕೃತಿಯೆಂಬ ಹೆಗ್ಗಳಿಕೆ ಹೊಂದಿದೆ. ಈ ಕೃತಿಯಲ್ಲಿ, ನ್ಯೂಟನ್‌ರು ವಿವರಿಸಿದ ಸಾರ್ವತ್ರಿಕ ಗುರುತ್ವಾಕರ್ಷಣೆ ಹಾಗೂ ಮೂರು ಗತಿಸೂತ್ರಗಳು ಮುಂದಿನ ಮೂರು ಶತಮಾನಗಳ ಕಾಲ ಭೌತಿಕ ಬ್ರಹ್ಮಾಂಡದ ವೈಜ್ಞಾನಿಕ ನೋಟವನ್ನೇ ಆಳಿದವು.

ನ್ಯೂಟನ್‌ರು ಭೂಮಿಯ ಮೇಲಿನ ವಸ್ತುಗಳ ಚಲನೆ ಹಾಗೂ ಬಾಹ್ಯಾಕಾಶ ವಸ್ತುಗಳ ಚಲನೆಯೂ ಒಂದೇ ಗುಂಪಿನ ನೈಸರ್ಗಿಕ ಸೂತ್ರಗಳನ್ನು ಪಾಲಿಸುತ್ತವೆ ಎಂದು ಕೆಪ್ಲರನ ಗ್ರಹಗಳ ಚಲನೆಯ ಮೇಲಿನ ಸೂತ್ರಗಳು ಹಾಗೂ ತನ್ನ ಗುರುತ್ವಾಕರ್ಷಣಾ ಸಿದ್ಧಾಂತಗಳ ನಡುವಿನ ಸಾಮರಸ್ಯವನ್ನು ತೋರಿಸಿದರು. ಆ ಮೂಲಕ ಸೂರ್ಯಕೇಂದ್ರಿತವ್ಯವಸ್ಥೆಯ ಉಳಿದ ಅನುಮಾನಗಳನ್ನು ಪರಿಹರಿಸಿ ವೈಜ್ಞಾನಿಕ ಕ್ರಾಂತಿಯನ್ನು ಮುನ್ನಡೆಸಿದರು.

ಯಂತ್ರಶಾಸ್ತ್ರದಲ್ಲಿ, ನ್ಯೂಟನ್‌ರು ಅವಿಚ್ಛಿನ್ನತೆ/ಆವೇಗ ಮತ್ತು ಕೋನೀಯ ಅವಿಚ್ಛಿನ್ನತೆ/ಆವೇಗಗಳ ಸಂರಕ್ಷಣಾ ನಿಯಮಗಳನ್ನು ಪ್ರತಿಪಾದಿಸಿದರು. ದೃಗ್ವಿಜ್ಞಾನದಲ್ಲಿ, ಅವರು ಪ್ರಪ್ರಥಮವಾಗಿ ಕಾರ್ಯರೂಪದಲ್ಲಿ ಪ್ರತಿಫಲನ ದೂರದರ್ಶ ವನ್ನು ನಿರ್ಮಿಸಿದರಲ್ಲದೆ ಪ್ರಿಸಮ್‌/ಅಶ್ರಗವು ಬಿಳಿ ಬೆಳಕನ್ನು ಚದುರಿಸಿ ಅನೇಕ ವರ್ಣಗಳನ್ನಾಗಿ ವಿಭಜಿಸಿ ದೃಶ್ಯಸಾಧ್ಯ ರೋಹಿತವನ್ನಾಗಿಸಬಲ್ಲದು ಎಂಬ ಅವಲೋಕನದ ಮೇಲೆ ಆಧಾರಿತವಾಗಿ ವರ್ಣ ಸಿದ್ಧಾಂತವನ್ನು ವಿಷದಪಡಿಸಿದರು. ಅವರು ಪ್ರಯೋಗಾತ್ಮಕ ತಂಪಾಗಿಸುವಿಕೆಯ ಸೂತ್ರವನ್ನು ರಚಿಸಿದರಲ್ಲದೇ ಶಬ್ದದ ವೇಗವನ್ನು ಅಭ್ಯಸಿಸಿದರು.

ಗಣಿತಶಾಸ್ತ್ರದಲ್ಲಿ, ನ್ಯೂಟನ್‌ರು ಚಲನ ಮತ್ತು ಅಖಂಡ ಕಲನಗಳ ಅಭಿವೃದ್ಧಿಯ ಗೌರವವನ್ನು ಗಾಟ್‌ಫ್ರೀಡ್‌ ಲೇಬಿನಿಜ್/ಲೈಬ್ನಿಟ್ಸ್‌‌‌ರೊಂದಿಗೆ‌ ಹಂಚಿಕೊಂಡಿದ್ದಾರೆ. ಸಾಧಾರಣೀಕರಿಸಿದ ದ್ವಿಪದ ಪ್ರಮೇಯವನ್ನು ನಿರೂಪಿಸಿದ ಅವರು “ನ್ಯೂಟನ್‌ರ ವಿಧಾನ” ಎಂದು ಕರೆಯಲ್ಪಡುವ ಫಂಕ್ಷನ್ನಿನ/ಕ್ರಿಯೆಯಲ್ಲಿರುವ ಸೊನ್ನೆಗಳನ್ನು ಅಂದಾಜಿಸುವ ವಿಧಾನವನ್ನು ಕಂಡುಹಿಡಿದು ಘಾತಸರಣಿಗಳ ಅಧ್ಯಯನಕ್ಕೆ ಕಾಣಿಕೆ ನೀಡಿದರು.

ವಿಜ್ಞಾನದ ಇತಿಹಾಸದಲ್ಲಿ ನ್ಯೂಟನ್‌ ಅಥವಾ ಆಲ್ಬರ್ಟ್ ಐನ್‌ಸ್ಟೀನ್‌ರಲ್ಲಿ ಯಾರು ಹೆಚ್ಚಿನ ಪ್ರಭಾವ ಬೀರಿದ್ದರು ಎಂಬ ಬಗ್ಗೆ ಬ್ರಿಟನ್‌ನ ರಾಯಲ್‌ ಸೊಸೈಟಿಯು 2005ರಲ್ಲಿ ನಡೆಸಿದ ವಿಜ್ಞಾನಿಗಳ ಮತ್ತು ಸಾರ್ವಜನಿಕರ ಸಮೀಕ್ಷೆಯಲ್ಲಿ ಸ್ಟಷ್ಟವಾದ ಪ್ರಕಾರ ನ್ಯೂಟನ್‌ರು ವಿಜ್ಞಾನಿಗಳಿಗೆ ಈಗಲೂ ಪ್ರಭಾವಶಾಲಿಯಾಗಿಯೇ ಮುಂದುವರೆದಿದ್ದಾರೆ. ಒಟ್ಟಾರೆಯಾಗಿ ವಿಜ್ಞಾನಕ್ಕೆ ನೀಡಿದ ಕೊಡುಗೆಯಲ್ಲಿ ಹೆಚ್ಚಿನ ಪಾಲನ್ನು, ನ್ಯೂಟನ್‌ ನೀಡಿದ್ದಾರೆ ಎಂದು ಪರಿಗಣಿತವಾಗಿದ್ದರೂ, ಮನುಕುಲಕ್ಕೆ ನೀಡಿದ ಕೊಡುಗೆಯಲ್ಲಿ ಇಬ್ಬರೂ ಸಹಾ ಸಮೀಪವರ್ತಿಗಳು.

ನ್ಯೂಟನ್‌ರು ಸಂಪ್ರದಾಯಬದ್ಧ ಕ್ರೈಸ್ತರಲ್ಲದೇ ಇದ್ದರೂ ಬಹಳಷ್ಟು ಧರ್ಮನಿಷ್ಟರಾಗಿದ್ದು, ಇಂದು ಅವರನ್ನು ನೆನೆಸಿಕೊಳ್ಳುವ ಪ್ರಕೃತಿ/ನೈಸರ್ಗಿಕ ವಿಜ್ಞಾನಕ್ಕಿಂತಲೂ ಹೆಚ್ಚು ಬೈಬಲ್‌ನ ವ್ಯಾಖ್ಯಾನಗಳನ್ನು ಬರೆದಿದ್ದರು.

# ಮರಣ :
ತನ್ನ ಜೀವನದ ಕೊನೆಯ ದಿನಗಳಲ್ಲಿ, ನ್ಯೂಟನ್‌ರು ವಿಂಚೆಸ್ಟರ್‌ ಹತ್ತಿರದ ಕ್ರಾನ್‌ಬರಿ ಉದ್ಯಾನದ ಬಳಿ ಮನೆ ಕೊಂಡುಕೊಂಡು ಅದರಲ್ಲಿ ತಮ್ಮ ಸೋದರ ಸೊಸೆ ಹಾಗೂ ಆಕೆಯ ಪತಿಯೊಂದಿಗೆ 1727ರಲ್ಲಿ ತಾವು ಮರಣಿಸುವವರೆಗೆ ಇದ್ದರು. ನ್ಯೂಟನ್‌ರು 31 ಮಾರ್ಚ್‌ 1727ರಂದು ಲಂಡನ್‌ನಲ್ಲಿ ನಿದ್ದೆಯಲ್ಲೇ ಕೊನೆಯುಸಿರೆಳೆದರು, ನಂತರ ಅವರ ವೆಸ್ಟ್‌ಮಿನ್‌ಸ್ಟರ್‌ ಆಬ್ಬೆಯಲ್ಲಿ ಅವರ ಶವಸಂಸ್ಕಾರ ನಡೆಸಲಾಯಿತು. ಅವರ ಅರೆ-ಸೋದರಸೊಸೆ, ಕ್ಯಾಥರೀನ್‌ ಬಾರ್ಟನ್‌ ಕಾಂಡ್ಯೂಟ್‌, ಲಂಡನ್‌ನ ಜರ್ಮಿನ್‌ ಸ್ಟ್ರೀಟ್‌ನಲ್ಲಿನ ಮನೆಯಲ್ಲಿ ಸಾಮಾಜಿಕ ವ್ಯವಹಾರ ಸಹಾಯಕಿಯಾಗಿದ್ದರು; ಆಕೆಯು ಸಿಡುಬಿನಿಂದ ಚೇತರಿಸಿಕೊಳ್ಳುತ್ತಿದ್ದಾಗ ಆಕೆಗೆ ಬರೆದ ಪತ್ರದ ಪ್ರಕಾರ ನ್ಯಾಟನ್‌ರು ಆಕೆಯ “ಪ್ರೀತಿಯ ಮಾವ”ನಾಗಿದ್ದರು. ಮಕ್ಕಳಿರದಿದ್ದ ನ್ಯೂಟನ್‌ರು, ತಮ್ಮ ಕೊನೆಯ ದಿನಗಳಲ್ಲಿ ತಮ್ಮ ಸಂಬಂಧಿಕರಿಗೆ ತಮ್ಮ ಆಸ್ತಿಗಳನ್ನು ಹಂಚಿ, ಮೃತ್ಯುಪತ್ರ ಬರೆಯದೇ ಮರಣಿಸಿದರು.

# ನ್ಯೂಟನ್‍ನ ಚಲನೆಯ ನಿಯಮಗಳು :
ನ್ಯೂಟನ್ನನ ಚಲನೆಯ ನಿಯಮಗಳು ಮೂರು ಭೌತಿಕ ನಿಯಮಗಳಾಗಿದ್ದು ಇವು ಒಟ್ಟಿಗೆ ಶಾಸ್ತ್ರೀಯ ಯಂತ್ರಶಾಸ್ತ್ರಕ್ಕೆ ಅಡಿಪಾಯ ಹಾಕಿವೆ. ಅವು ಕಾಯ ಮತ್ತು ಅದರ ಮೇಲೆ ವರ್ತಿಸುತ್ತಿರುವ ಶಕ್ತಿ ಮತ್ತು ಶಕ್ತಿಗನುಗುಣವಾಗಿ ಅದರ ಚಲನೆ ಇವುಗಳ ನಡುವಿನ ಸಂಬಂಧವನ್ನು ವಿವರಿಸುತ್ತವೆ. ಸುಮಾರು ಮೂರು ಶತಮಾನಗಳ, ಹಿಂದೆ ಅವರು ಇದನ್ನು ಅನೇಕ ವಿಧಗಳಲ್ಲಿ ವಿವರಿಸಿದರು. ಈ ಕೆಳಗಿನಂತೆ ಅರ್ಥಗರ್ಭಿತವಾಗಿ ಸಾರಂಶಿಕರಿಸಲಾಗಿದೆ.

➤ ಮೊದಲನೇ ನಿಯಮ : ಒಂದು ಜಡತ್ವದ ಚೌಕಟ್ಟಿನಲ್ಲಿ, ವಸ್ತುವನ್ನು ವೀಕ್ಷಿಸಿದಾಗ ಬಾಹ್ಯ ಶಕ್ತಿಯಿಂದ ಪರಿಣಾಮಕ್ಕೊಳಗಾಗದ ಹೊರತು, ಅದು ಸ್ಥಿರ ಅಥವಾ ಸ್ಥಿರ ವೇಗದಲ್ಲಿ ಚಲಿಸುತ್ತಿರುತ್ತದೆ.

➤ ಎರಡನೆ ನಿಯಮ: F = ma: ವಸ್ತುವಿನ ಮೇಲೆ ಬಾಹ್ಯ ಶಕ್ತಿಗಳಿಂದಾದ ವೆಕ್ಟರ್ ಮೊತ್ತವು ವಸ್ತುವಿನ ದ್ರವ್ಯರಾಶಿಯನ್ನು ಅದರ ಒತ್ತಡದೇರಿಕೆಯೊಂದಿಗೆ ಗುಣಿಸಿದಾಗ ಬರುವ ಫಲಿತಾಂಶಕ್ಕೆ ಸಮಾನವಾಗಿರುತ್ತದೆ.

➤ ಮೂರನೇ ನಿಯಮ: ಒಂದು ದೇಹ ಎರಡನೇ ದೇಹದ ಮೇಲೆ ಒತ್ತಡ ಹೇರಿದರೆ, ಎರಡನೇ ದೇಹ ಏಕಕಾಲದಲ್ಲಿ ಮೊದಲ ದೇಹದ ಮೇಲೆ ವಿರುದ್ಧ ದಿಕ್ಕಿನಲ್ಲಿ ಮತ್ತು ಪರಿಮಾಣದಲ್ಲಿ ಸಮನಾಗಿರುವ ಒಂದು ಶಕ್ತಿಯನ್ನು ಬೀರುತ್ತದೆ.

ಚಲನೆಯ ಮೂರು ನಿಯಮಗಳನ್ನು ಮೊದಲು ನ್ಯೂಟನ್ ವಿವರಿಸಿದರು. ನಂತರ ಅನೇಕ ಭೌತಿಕ ವಸ್ತು ಮತ್ತು ವ್ಯವಸ್ಥೆಗಳ ಚಲನೆಯ ತನಿಖೆಯಲ್ಲಿ ಬಳಕೆಯಾಯಿತು. 1687 ರಲ್ಲಿ ಪ್ರಕಟವಾದ ಅವರ ಫಿಲಾಸೊಫೇ ನ್ಯಾಚುರಲೀಸ್ ಪ್ರಿನ್ಸಿಪಿಯಾ ಮ್ಯಾಥೆಮೆಟಿಕಾದಲ್ಲಿ (ನ್ಯಾಚುರಲ್ ಫಿಲಾಸಫಿ ಮ್ಯಾಥೆಮೆಟಿಕಲ್ ಪ್ರಿನ್ಸಿಪಲ್ಸ್), ಮೊದಲು ಸಂಕಲಿಸಲಾಗಿದೆ. ಉದಾಹರಣೆಗೆ, ಪಠ್ಯದ ಮೂರನೆಯ ಸಂಪುಟದಲ್ಲಿ, ನ್ಯೂಟನ್ರು ವಿವರಿಸಿದ ಸಾರ್ವತ್ರಿಕ ಗುರುತ್ವಾಕರ್ಷಣೆ ನಿಯಮ ಸೇರಿ ಚಲನೆಯ ಈ ನಿಯಮಗಳು, ಕೆಪ್ಲರನ ಗ್ರಹಗಳ ಚಲನೆಯ ನಿಯಮಗಳನ್ನು ವಿವರಿಸುತ್ತವೆಂದು ತೋರಿಸಿಕೊಟ್ಟರು.

➤  ಹೆಚ್ಚಿನ ಅಧ್ಯಯನಕ್ಕಾಗಿ :
# ಬಾಲ್ಯ ಮತ್ತು ಜೀವನ :
ನ್ಯೂಟನ್‌ಗೆ ಮೂರು ವರ್ಷವಾಗಿದ್ದಾಗ, ಆತನ ತಾಯಿ ಮರುಮದುವೆಯಾಗಿ, ತನ್ನ ಮಗನನ್ನು ಆತನ ತಾಯಿಯ ಕಡೆಯ ಅಜ್ಜಿ ಮಾರ್ಗೆರಿ ಐಸ್‌ಕಫ್‌ಳ ಆರೈಕೆಯಲ್ಲಿ ಬಿಟ್ಟು ತನ್ನ ನವಪತಿ ರೆವರೆಂಡ್‌ ಬರ್ನಾಬಸ್‌ ಸ್ಮಿತ್‌ರೊಡನೆ ಇರಲು ತೆರಳಿದರು. ಬಾಲಕ ಐಸಾಕ್‌ ತನ್ನ ಮಲತಂದೆಯನ್ನು ಇಷ್ಟಪಡದೇ, ಆತನನ್ನು ಮದುವೆಯಾದ ಕಾರಣ ತನ್ನ ತಾಯಿಯ ಮೇಲೆ ಶತೃತ್ವ ಬೆಳೆಸಿಕೊಂಡಿದ್ದುದಾಗಿ 19ನೇ ವಯಸ್ಸಿನ ತನಕ ಬರೆದಿಡಲಾದ ಪಾಪಗಳ ಪಟ್ಟಿಯಲ್ಲಿನ ಸಾಲಿನ ಮೂಲಕ ಶ್ರುತವಾಗುತ್ತದೆ: “ನನ್ನ ತಂದೆ ಹಾಗೂ ತಾಯಿ ಸ್ಮಿತ್‌ರನ್ನು ಮನೆಯಲ್ಲಿ ಕೂಡಿಹಾಕಿ ಸುಟ್ಟುಹಾಕುತ್ತೇನೆ ಎಂದು ಬೆದರಿಸಿದ್ದು.”

ಸುಮಾರು ಹನ್ನೆರಡನೇ ವರ್ಷದಿಂದ ಹದಿನೇಳನೆ ವರ್ಷದವರೆಗೆ, ನ್ಯೂಟನ್‌ರು ದ ಕಿಂಗ್ಸ್‌ ಸ್ಕೂಲ್‌, ಗ್ರಂಥಮ್‌ (ಅಲ್ಲಿನ ಗ್ರಂಥಾಲಯದ ಕಿಟಕಿಯ ಹೊಸ್ತಿಲಲ್ಲಿ ಇನ್ನೂ ಆತನ ಸಹಿಯನ್ನು ನೋಡಬಹುದು) ಎಂಬಲ್ಲಿ ಶಿಕ್ಷಣ ಪಡೆದನು. ಆತನನ್ನು ಶಾಲೆಯಿಂದ ಬಿಡಿಸಿದ ನಂತರ, ಅಕ್ಟೋಬರ್‌ 1659ರ ವೇಳೆಗೆ, ಆತನನ್ನು ವೂಲ್ಸ್‌‌ಥೋರ್ಪ್‌-ಬೈ-ಕೋಲ್‌ಸ್ಟರ್‌ವರ್ತ್‌ನಲ್ಲಿ ನೋಡಬಹುದಿತ್ತು. ಆತನ ಎರಡನೇ ಬಾರಿಗೆ ವಿಧವೆಯಾದ ತಾಯಿ, ಆತನನ್ನು ರೈತನನ್ನಾಗಿಸಲು ಪ್ರಯತ್ನಿಸುತ್ತಿದ್ದಳು. ಆತನು ಕೃಷಿಯನ್ನು ದ್ವೇಷಿಸುತ್ತಿದ್ದನು. ಕಿಂಗ್ಸ್‌ ಸ್ಕೂಲ್‌ನ ಬೋಧಕ ಹೆನ್ರಿ ಸ್ಟೋಕ್ಸ್‌, ಆತನ ವಿದ್ಯೆಯನ್ನು ಪೂರೈಸಲು ಅನುವಾಗುವಂತೆ, ಮತ್ತೆ ಶಾಲೆಗೆ ಕಳುಹಿಸಲು ಅವನ ತಾಯಿಯನ್ನು ಒಪ್ಪಿಸಿದನು. ಶಾಲೆ ಬಳಿಯ ಪುಂಡರ ಮೇಲಿನ ಸೇಡು ತೀರಿಸುವ ಉದ್ದೇಶದಿಂದ ಭಾಗಶಃ ಪ್ರೇರಿತನಾಗಿ, ಆತನು ಉನ್ನತ-ಶ್ರೇಯಾಂಕಿತ ವಿದ್ಯಾರ್ಥಿಯಾದನು.

ಜೂನ್‌ 1661ರಲ್ಲಿ, ಆತನನ್ನು ಕೇಂಬ್ರಿಡ್ಜ್‌ನ ಟ್ರಿನಿಟಿ ಮಹಾವಿದ್ಯಾಲಯ(ಕಾಲೇಜ್‌ಗೆ)ಕ್ಕೆ ಸೈಜರ್‌ ಆಗಿ – ಒಂದು ತರಹದ ಕೆಲಸ-ಶಿಕ್ಷಣದ ವ್ಯವಸ್ಥೆಯಡಿ ಸೇರಿಸಲಾಯಿತು. ಆ ಸಮಯದಲ್ಲಿ, ವಿದ್ಯಾಲಯದ ಪಾಠಗಳು, ಅರಿಸ್ಟಾಟಲ್‌ರ ಮೇಲೆ ಆಧಾರಿತವಾಗಿದ್ದವು, ಆದರೆ ನ್ಯೂಟನ್‌ ಆಧುನಿಕ ತತ್ವಜ್ಞಾನಿಗಳಾದ ಡೆಸ್ಕರ್ಟೆಸ್‌ ಮತ್ತು ಖಗೋಳಶಾಸ್ತ್ರಜ್ಞರಾದ ಕೊಪರ್ನಿಕಸ್‌, ಗೆಲಿಲಿಯೊ ಮತ್ತು ಕೆಪ್ಲರ್‌ರಂತಹಾ ವ್ಯಕ್ತಿಗಳ ಮುಂದುವರಿದ ವಿಚಾರಗಳ ಬಗ್ಗೆ ಓದಲು ಆರಿಸಿಕೊಂಡರು.

1665ರಲ್ಲಿ, ಆತನು ಸಾಧಾರಣೀಕರಿಸಿದ ದ್ವಿಪದ ಪ್ರಮೇಯವನ್ನು ರಚಿಸಿ ಮುಂದೆ ಅನಂತಸೂಕ್ಷ್ಮ ಕಲನವಾದ ಗಣಿತ ಸಿದ್ಧಾಂತವನ್ನು ಅಭಿವೃದ್ಧಿಪಡಿಸಲು ಆರಂಭಿಸಿದರು. ನ್ಯೂಟನ್‌ರು 1665ರ ಆಗಸ್ಟ್‌ನಲ್ಲಿ ಪದವಿ ಪಡೆದ ತಕ್ಷಣ ಮಹಾಮಾರಿ ಪ್ಲೇಗ್‌ನ ಮುಂಜಾಗ್ರತೆಗಾಗಿ, ವಿಶ್ವವಿದ್ಯಾಲಯವು ಮುಚ್ಚಿತು.

ಸಾಧಾರಣ ಕೇಂಬ್ರಿಡ್ಜ್‌ ವಿದ್ಯಾರ್ಥಿಯಾಗಿಯೇ, ನ್ಯೂಟನ್‌ರ ವೂಲ್ಸ್‌‌ಥೋರ್ಪ್‌ನ ಮನೆಯಲ್ಲಿನ ಮುಂದಿನ ಎರಡು ವರ್ಷಗಳ ಕಾಲ ನಡೆದ ಖಾಸಗಿ ಅಧ್ಯಯನಗಳು ಕಲನ, ದೃಗ್ವಿಜ್ಞಾನ ಮತ್ತು ಗುರುತ್ವಾಕರ್ಷಣೆಯ ನಿಯಮಗಳ ಅಭಿವೃದ್ಧಿಗೆ ಕಾರಣವಾದವು. 1667ರಲ್ಲಿ ಟ್ರಿನಿಟಿಯ ಫೆಲೋ ಆಗಿ ಕೇಂಬ್ರಿಡ್ಜ್‌ಗೆ ಮರಳಿದರು.

ನ್ಯೂಟನ್‌ರ ಗಣಿತಶಾಸ್ತ್ರದ ಮೇಲಿನ ಅಧ್ಯಯನಗಳು “ಆ ಕಾಲದಲ್ಲಿ ಅಭ್ಯಸಿಸುತ್ತಿದ್ದ ಗಣಿತಶಾಸ್ತ್ರದ ಪ್ರತಿಯೊಂದು ವಿಭಾಗವನ್ನು ಪ್ರತ್ಯೇಕವಾಗಿ ಮುನ್ನಡೆಸಿತು” ಎಂಬ ಅಭಿಪ್ರಾಯವಿದೆ. ವ್ಯತ್ಯಾಸದ ದರ ಅಥವಾ ಕಲನ ಎಂದು ಕರೆಯಲಾಗುವ ನ್ಯೂಟನ್‌ರ ಈ ವಿಷಯದ ಮೇಲಿನ ಮುಂಚಿನ ಅಧ್ಯಯನವನ್ನು ಈಗಲೂ ನೋಡಬಹುದು, ಉದಾಹರಣೆಗೆ, ಇತ್ತೀಚೆಗೆ ಪ್ರಕಟಿಸಿದ ನ್ಯೂಟನ್‌ರ ಗಣಿತಶಾಸ್ತ್ರದ ಪ್ರಬಂಧಗಳ ಭಾಗವಾದ ಅಕ್ಟೋಬರ್‌ 1666ರ ಹಸ್ತಪ್ರತಿಯಲ್ಲಿದೆ. ಅವರ ಗಣಿತಶಾಸ್ತ್ರದ ಅಧ್ಯಯನಕ್ಕೆ ಸಂಬಂಧಪಟ್ಟ ಮತ್ತೊಂದು ವಿಷಯವೆಂದರೆ ಅಪರಿಮಿತ ಸರಣಿ. “ಡೆ ಅನಾಲಿಸಿ ಪೆರ್‌ ಎಕ್ವೇಷನ್ಸ್‌ ನ್ಯೂಮರೋ ಟರ್ಮಿನೊರಮ್‌ ಇನ್‌ಫಿನಿಟಾಸ್‌” (“ಸಮೀಕರಣಗಳ ಮೂಲಕ ವಿಶ್ಲೇಷಣೆಯಲ್ಲಿ ಪರಿಮಾಣಗಳ ಸಂಖ್ಯೆ ಅಪರಿಮಿತ”) ಎಂದು ಬರೆದಿದ್ದ ನ್ಯೂಟನ್‌ರ ಹಸ್ತಪ್ರತಿಯನ್ನು ಐಸಾಕ್‌ ಬಾರ್ರೋರವರು ಜಾನ್‌ ಕಾಲಿನ್ಸ್‌‌ರಿಗೆ ಜೂನ್‌ 1669ರಲ್ಲಿ ಕಳಿಸಿದ್ದರು: ಆಗಸ್ಟ್‌ 1669ರಲ್ಲಿ ಬಾರ್ರೋರವರು ಕಾಲಿನ್ಸ್‌ರವರಿಗೆ ಅದರ ಲೇಖಕರ ಬಗ್ಗೆ “ಆತ ಶ್ರೀ ನ್ಯೂಟನ್‌, ನಮ್ಮ ವಿದ್ಯಾಲಯದ ಓರ್ವ ಫೆಲೊ, ಚಿಕ್ಕವಯಸ್ಸಿನವರಾಗಿದ್ದರೂ ಅದ್ಭುತ ಮೇಧಾವಿ ಹಾಗೂ ಈ ವಿಷಯಗಳಲ್ಲಿ ತಜ್ಞತೆ ಹೊಂದಿದ್ದಾರೆ” ಎಂದು ಪರಿಚಯಿಸಿದರು.

ನ್ಯೂಟನ್‌ರು ನಂತರ ಲೇಬಿನಿಜ್‌ರೊಂದಿಗೆ ಅನಂತಸೂಕ್ಷ್ಮ ಕಲನದ ಬೆಳವಣಿಗೆಯಲ್ಲಿನ ಆದ್ಯತೆಗಳ ಬಗ್ಗೆ ಚರ್ಚೆಯಲ್ಲಿ ತೊಡಗಿದ್ದರು. ಬಹಳಷ್ಟು ಆಧುನಿಕ ಇತಿಹಾಸಕಾರರ ಪ್ರಕಾರ ನ್ಯೂಟನ್‌ ಮತ್ತು ಲೇಬಿನಿಜ್‌ ಇಬ್ಬರೂ ಅನಂತಸೂಕ್ಷ್ಮ ಕಲನವನ್ನು ಸ್ವತಂತ್ರವಾಗಿ, ಆದರೆ ವಿಭಿನ್ನ ಅಂಕನ ಪದ್ಧತಿಗಳೊಂದಿಗೆ ಅಭಿವೃದ್ಧಿಪಡಿಸಿದರು. ಪ್ರಾಸಂಗಿಕವಾಗಿ ನ್ಯೂಟನ್‌ರು ಇದರ ಬಗ್ಗೆ 1693ರವರೆಗೆ ಏನನ್ನೂ ಪ್ರಕಟಿಸಿರಲಿಲ್ಲ, ಹಾಗೂ 1704ರವರೆಗೆ ಪೂರ್ಣ ಹೇಳಿಕೆ ನೀಡಿರಲಿಲ್ಲ, ಆದರೆ ಲೇಬಿನಿಜ್‌ರು 1684ರಲ್ಲಿ ತಮ್ಮ ವಿಧಾನಗಳ ಪೂರ್ಣ ವಿವರಣೆಯನ್ನು ಪ್ರಕಟಿಸಲು ಆರಂಭಿಸಿದ್ದರು. (ಲೇಬಿನಿಜ್‌ರ ಅಂಕನ ಪದ್ಧತಿ ಮತ್ತು “ವಿಕಲನ ವಿಧಾನ”ಗಳು, ಇತ್ತೀಚಿನ ದಿನಗಳಲ್ಲಿ ಹೆಚ್ಚು ಅನುಕೂಲಕರ ಅಂಕನಪದ್ಧತಿಗಳು ಎಂಬ ಅಭಿಪ್ರಾಯವಿದ್ದು ಐರೋಪ್ಯ ಗಣಿತಜ್ಞರು, ಹಾಗೂ 1820ರ ನಂತರ ಅಥವಾ ಆಸುಪಾಸಿನಲ್ಲಿ ಬ್ರಿಟಿಷ್‌ ಗಣಿತಜ್ಞರುಗಳಿಂದ ಅನುಸರಿಸಲ್ಪಟ್ಟಿದೆ.) ಆದಾಗ್ಯೂ ಆ ತರಹದ ಅಭಿಪ್ರಾಯದಲ್ಲಿ, ನ್ಯೂಟನ್‌ರ ಕಾಲದ ಮತ್ತು ಆಧುನಿಕ ಕಾಲದ ವಿಮರ್ಶಕರು ನ್ಯೂಟನ್‌ರ ಪ್ರಿನ್ಸಿಪಿಯಾ ದ ಪ್ರಥಮ ಪುಸ್ತಕ/Book 1ದಲ್ಲಿ (1687ರಲ್ಲಿ ಪ್ರಕಟವಾಗಿತ್ತು) ಮತ್ತು ಅದರ ಪೂರ್ವಭಾವಿ ಹಸ್ತಪ್ರತಿಗಳಾದ 1684ರ ಡೆ ಮೊಟು ಕಾರ್ಪೋರಂ ಇನ್‌ ಜೀರಂ (“ಕಕ್ಷೆಯಲ್ಲಿನ ವಸ್ತುಗಳ ಚಲನೆಯ ಬಗ್ಗೆ”)ಗಳ ವಿಚಾರದಲ್ಲಿ ಗಮನ ಸೆಳೆದ ಹಾಗೆ ಕಲನದ ವಿಷಯವನ್ನು ಗಮನಿಸುವುದನ್ನು ಬಿಡಲಾಗಿತ್ತು.

ನಾವು ತಿಳಿದ ಹಾಗೆ ಪ್ರಿನ್ಸಿಪಿಯಾ ವನ್ನು ಕಲನದ ಭಾಷೆಯಲ್ಲಿ ಬರೆದಿರಲಿಲ್ಲ ಅಥವಾ ನ್ಯೂಟನ್‌ರ (ನಂತರದ) ‘ಬಿಂದು/ಡಾಟ್‌’ ಅಂಕನಪದ್ಧತಿಯಲ್ಲಿ ಬರೆದಂತೆ ಇರಲಿಲ್ಲ. ಆದರೆ ನ್ಯೂಟನ್‌ರ ಅಧ್ಯಯನವು ನಶಿಸುವ ಅಲ್ಪ ಪ್ರಮಾಣದ ಅನುಪಾತಗಳ ಮಿತಿಯ ಮೇಲೆ ಆಧಾರಿತವಾದ ಜ್ಯಾಮಿತಿಯ ರೂಪದಲ್ಲಿ ಅನಂತಸೂಕ್ಷ್ಮ ಕಲನವನ್ನು ವ್ಯಾಪಕವಾಗಿ ಬಳಸುತ್ತದೆ : ನ್ಯೂಟನ್‌ರು ಪ್ರಿನ್ಸಿಪಿಯಾ ದಲ್ಲೇ ‘ಮೊದಲ ಹಾಗೂ ಕೊನೆಯ ಅನುಪಾತದ ವಿಧಾನ’ ಎಂಬ ಹೆಸರಿನಲ್ಲಿ ಇದನ್ನು ನಿದರ್ಶಿಸಿ, ತನ್ನ ಪ್ರತಿಪಾದನೆಯನ್ನು ಇದೇ ರೀತಿಯಲ್ಲಿ ಏಕೆ ಹಾಕಿದ್ದೆಂದು ‘ಈ ಮೂಲಕ ಅವಿಭಾಜ್ಯ ಸಂಖ್ಯೆಗಳ ವಿಧಾನದ ಮೂಲಕ ಅದನ್ನೇ ಮಾಡಲಾಗುತ್ತದೆ’ ಎಂಬ ಷರಾದೊಂದಿಗೆ ವಿವರಿಸಿದ್ದಾರೆ. ಈ ವಿವರಣೆಗಳಿಂದಾಗಿಯೇ ಪ್ರಿನ್ಸಿಪಿಯಾ ವನ್ನು ಆಧುನಿಕ ಕಾಲದಲ್ಲಿ “ಅನಂತಸೂಕ್ಷ್ಮ ಕಲನದ ಸಿದ್ಧಾಂತ ಹಾಗೂ ಅನ್ವಯಗಳೊಂದಿಗೆ ಸಮೃದ್ಧವಾದ ಪುಸ್ತಕ” ಎಂದು ಹಾಗೂ “ಲೆಕ್ವೆಲ್‌ ಎಸ್ಟ್‌ ಪ್ರೆಸ್ಕ್ಯು ಟೂಟ್‌ ಡೆ ಸೆ ಕ್ಯಾಲ್‌ಕಲ್‌” (‘ಇದರಲ್ಲಿರುವುದೆಲ್ಲಾ ಹೆಚ್ಚುಕಡಿಮೆ ಕಲನವೇ’) ಎಂದು ನ್ಯೂಟನ್‌ರ ಕಾಲ[೨೨]ದಲ್ಲಿ ಅಭಿಪ್ರಾಯಪಡಲಾಗಿತ್ತು. “ಅನಂತಸೂಕ್ಷ್ಮ ಸಣ್ಣ ವಸ್ತುಗಳ ಒಂದು ಅಥವಾ ಹೆಚ್ಚಿನ” ಎಂಬ ವಿಷಯವನ್ನೊಳಗೊಂಡ ವಿಧಾನಗಳನ್ನು ನ್ಯೂಟನ್‌/ಅವರ 1684ರಲ್ಲಿನ[೨೩] ಡೆ ಮೊಟು ಕಾರ್ಪೊರಂ ಇನ್‌ ಜೀರಂ ಮತ್ತು “1684ಕ್ಕೆ ಮುಂಚಿನ ಎರಡು ದಶಕಗಳಲ್ಲಿ”[೨೪] ಚಲನೆಯ ಬಗೆಗಿನ ಪ್ರಬಂಧಗಳಲ್ಲಿ ನ್ಯೂಟನ್‌ರು ಬಳಸಿದ್ದರು.

ನ್ಯೂಟನ್‌ರು ತಮ್ಮ ಕಲನವನ್ನು ಪ್ರಕಟಿಸಲು ಇಚ್ಛೆಪಡದ ಮೂಲ ಕಾರಣ ತಮ್ಮನ್ನು ಆ ಬಗ್ಗೆ ಅಪಹಾಸ್ಯ ಮಾಡುತ್ತಾರೆಂಬ ಭಯ ಎನ್ನಲಾಗಿದೆ.[ಸೂಕ್ತ ಉಲ್ಲೇಖನ ಬೇಕು] ನ್ಯೂಟನ್‌ರು ಮೊದಲಿಂದಲೂ ನ್ಯೂಟನ್‌ರ ಗುರುತ್ವಾಕರ್ಷಣ ಸಿದ್ಧಾಂತದಿಂದ ಪ್ರಭಾವಿತರಾಗಿದ್ದ ಸ್ವಿಸ್‌ ಗಣಿತಜ್ಞ ನಿಕೊಲಸ್‌ ಫಾಟಿಯೊ ಡೆ ಡುಯಿಲಿಯರ್‌ರೊಂದಿಗೆ ಸಮೀಪದ ಬಾಂಧವ್ಯ ಹೊಂದಿದ್ದರು. 1691ರಲ್ಲಿ ಡುಯಿಲಿಯರ್‌ ನ್ಯೂಟನ್‌ರ ಪ್ರಿನ್ಸಿಪಿಯಾ ದ ನವೀನ ಆವೃತ್ತಿ ಸಿದ್ಧ ಮಾಡಲು ಯೋಜಿಸಿದ್ದರು, ಆದರೆ ಅದನ್ನು ಪೂರೈಸಲಿಲ್ಲ. ಆದರೆ, 1693ರಲ್ಲಿ ಇವರಿಬ್ಬರ ನಡುವಿನ ಬಾಂಧವ್ಯವು ಬದಲಾಯಿತು. ಆ ಸಮಯದಲ್ಲಿ, ಡುಯಿಲಿಯರ್‌ ಲೇಬಿನಿಜ್‌ ರೊಂದಿಗೆ ಅನೇಕ ಪತ್ರವ್ಯವಹಾರಗಳನ್ನು ಸಹಾ ನಡೆಸಿದ್ದರು.

1699ರಿಂದ ರಾಯಲ್‌ ಸೊಸೈಟಿಯ ಇತರ ಸದಸ್ಯರು (ನ್ಯೂಟನ್‌ರು ಅದರ ಸದಸ್ಯರಾಗಿದ್ದರು) ಲೇಬಿನಿಜ್‌ರ ಮೇಲೆ ಕೃತಿಚೌರ್ಯದ ಆಪಾದನೆ ಹೊರಿಸಲಾರಂಭಿಸಿದರು, 1711ರಲ್ಲಿ ಈ ವಿವಾದವು ಪೂರ್ಣ ಪ್ರಮಾಣದಲ್ಲಿ ಭುಗಿಲೆದ್ದಿತು. ನ್ಯೂಟನ್‌ರ ರಾಯಲ್‌ ಸೊಸೈಟಿ ನಡೆಸಿದ ಅಧ್ಯಯನದಲ್ಲಿ ನ್ಯೂಟನ್‌ರು ನಿಜವಾದ ಶೋಧಕರೆಂದು ಲೇಬಿನಿಜ್‌ರನ್ನು ಓರ್ವ ಮೋಸಗಾರರೆಂದು ಘೋಷಿಸಿತು. ನ್ಯೂಟನ್‌ರು ಸ್ವತಃ ಅಧ್ಯಯನದ ಮುಕ್ತಾಯದಲ್ಲಿ ಲೇಬಿನಿಜ್‌ರನ್ನು ಟೀಕಿಸಿದ್ದರೆಂದು ತಿಳಿದ ಮೇಲೆ ಈ ಅಧ್ಯಯನವನ್ನೇ ಅನುಮಾನಿಸಲಾಯಿತು. ಆಗ ಆರಂಭಗೊಂಡ ಕಟುವಾದ ನ್ಯೂಟನ್‌ v. ಲೇಬಿನಿಜ್‌ ಕಲನ ವಿವಾದವು, 1716ರಲ್ಲಿ ಲೇಬಿನಿಜ್‌ರ ಮರಣದವರೆಗೂ ನಡೆದು ನ್ಯೂಟನ್‌ ಮತ್ತು ಲೇಬಿನಿಜ್‌ರ ಮನಶ್ಶಾಂತಿಯನ್ನು ಕಿತ್ತುಕೊಂಡಿತ್ತು.

ಸಾಮಾನ್ಯವಾಗಿ ನ್ಯೂಟನ್‌ರನ್ನು ಯಾವುದೇ ಘಾತಕ್ಕೆ ಅನ್ವಯವಾಗುವ ಸಾಮಾನ್ಯೀಕರಿಸಿದ ದ್ವಿಪದ ಪ್ರಮೇಯದ ಶೋಧಕರೆಂದು ಗೌರವಿಸಲಾಗುತ್ತದೆ. ನ್ಯೂಟನ್‌ರ ಅನನ್ಯತೆ, ನ್ಯೂಟನ್‌ರ ವಿಧಾನ, ಘನ ಸಮತಲ ವಕ್ರಗಳ ವರ್ಗೀಕರಣ (ಎರಡು ಚರಾಕ್ಷರಗಳಲ್ಲಿನ ಮೂರನೇ ದರ್ಜೆಯ ಬಹುಪದೀಯ ಪರಿಮಾಣಗಳು), ಪರಿಮಿತ ವ್ಯತ್ಯಾಸಗಳ ಸಿದ್ಧಾಂತಕ್ಕೆ ಗಮನಾರ್ಹ ಕೊಡುಗೆ ನೀಡಿದರಲ್ಲದೇ, ಘಾತಸೂಚಿಗಳನ್ನು ಬಳಸಿದ ಹಾಗೂ ಡಿಯೊಫಾಂಟೈನ್‌ ಸಮೀಕರಣಕ್ಕೆ ಪರಿಹಾರಗಳನ್ನು ನೀಡಲು ಭುಜಯುಗ್ಮ ರೇಖಾಗಣಿತವನ್ನು ಬಳಸಿದ ಪ್ರಥಮರಾಗಿದ್ದಾರೆ. ಹರಾತ್ಮಕ ಸರಣಿಗಳ ಭಾಗಶಃ ಸಂಕಲನವನ್ನು ಪ್ರತಿಘಾತಗಳನ್ನು ಬಳಸಿ ಅಂದಾಜಿಸಿದ್ದರು (ಯೂಲರ್‌’ರ ಸಂಕಲನ ಸೂತ್ರದ ಪೂರ್ವಗಾಮಿ), ಮತ್ತು ಘಾತ ಸರಣಿಗಳನ್ನು ಆತ್ಮವಿಶ್ವಾಸದಿಂದ ಬಳಸಿದ ಹಾಗೂ ಪ್ರತ್ಯಾವರ್ತಿಸಿದ ಪ್ರಥಮ ವ್ಯಕ್ತಿಯೂ ಹೌದು.

ಲುಕಾಸಿಯಾದ ಗಣಿತಶಾಸ್ತ್ರದ ಪ್ರಾಧ್ಯಾಪಕರಾಗಿ 1669ರಲ್ಲಿ ಆಯ್ಕೆಯಾದರು. ಆ ದಿನಗಳಲ್ಲಿ, ಕೇಂಬ್ರಿಡ್ಜ್‌ನ ಅಥವಾ ಆಕ್ಸ್‌ಫರ್ಡ್‌ನ ಯಾವುದೇ ಫೆಲೊ ದೀಕ್ಷೆ ಪಡೆದ ಆಂಗ್ಲಿಕನ್‌ ಪಾದ್ರಿಯಾಗಿರಬೇಕಿತ್ತು. ಆದಾಗ್ಯೂ ಲುಕಾಸಿಯಾದ ಪ್ರಾಧ್ಯಾಪಕ ಹುದ್ದೆಯ ನಿಯಮಗಳ ಪ್ರಕಾರ ಚರ್ಚ್‌ನ ಚಟುವಟಿಕೆಗಳಲ್ಲಿ ಸಕ್ರಿಯವಾಗಿರಬಾರದು ಎಂದಿತ್ತು (ವಿಜ್ಞಾನಕ್ಕೆಂದು ಹೆಚ್ಚಿನ ಸಮಯ ಮೀಸಲಿಡಲೆಂದಿರಬಹುದು). ನ್ಯೂಟನ್‌ರು ದೀಕ್ಷೆ ಪಡೆಯಬೇಕೆಂಬ ಅಗತ್ಯದಿಂದ ವಿನಾಯಿತಿ ನೀಡಬೇಕೆಂದು ವಾದ ಮಾಡಿದರು, ಅನುಮತಿ ನೀಡಬೇಕಿದ್ದ ಚಾರ್ಲ್ಸ್‌ II ಈ ವಾದವನ್ನು ಒಪ್ಪಿದರು. ಹಾಗಾಗಿ ನ್ಯೂಟನ್‌ರ ಧಾರ್ಮಿಕ ನಿಲುವುಗಳು ಹಾಗೂ ಆಂಗ್ಲಿಕನ್‌ ಸಂಪ್ರದಾಯಶರಣತೆಗಳ ನಡುವಿನ ಸಂಘರ್ಷವು ನಿವಾರಣೆಯಾಯಿತು.

1670ರಿಂದ 1672ರವರೆಗೆ, ನ್ಯೂಟನ್‌ರು ದೃಗ್ವಿಜ್ಞಾನದ ಮೇಲೆ ಉಪನ್ಯಾಸ ನೀಡಿದರು/ಉಪನ್ಯಾಸಕರಾಗಿದ್ದರು. ಈ ಅವಧಿಯಲ್ಲಿ ಅವರು ಬೆಳಕಿನ ವಕ್ರೀಭವನವನ್ನು ಪರಿಶೋಧಿಸಿದರು, ಪ್ರಿಸಮ್‌/ಅಶ್ರಗ ಶ್ವೇತ ಬೆಳಕನ್ನು ವರ್ಣಗಳ ರೋಹಿತವನ್ನಾಗಿ ವಿಂಗಡಿಸುತ್ತದೆ ಹಾಗೂ ಮಧ್ಯದಲ್ಲಿ ಮಸೂರವನ್ನಿಟ್ಟು ಎರಡನೇ ಪ್ರಿಸಮ್‌/ಅಶ್ರಗವನ್ನಿಟ್ಟರೆ, ಅದು ಬಹುವರ್ಣದ ರೋಹಿತವನ್ನು ಮತ್ತೆ ಶ್ವೇತ ಬೆಳಕಾಗಿ ಒಂದುಗೂಡಿಸುತ್ತದೆ ಎಂದು ಪ್ರಮಾಣೀಕರಿಸಿದರು.

ಅವರು ಬಣ್ಣದ ಬೆಳಕು ತನ್ನ ಲಕ್ಷಣಗಳನ್ನು ಬದಲಾಯಿಸುವುದಿಲ್ಲವೆಂದು, ಬಣ್ಣದ ಪ್ರಭೆಯೊಂದನ್ನು ಪ್ರತ್ಯೇಕಿಸಿ ವಿವಿಧ ವಸ್ತುಗಳ ಮೇಲೆ ಹಾಯಿಸಿ ತೋರಿಸಿದರು. ನ್ಯೂಟನ್‌ರು ಪ್ರತಿಫಲಿಸಿದಾಗಲಿ ಅಥವಾ ಚದುರಿದಾಗಲಿ ಅಥವಾ ಪಸರಿಸಿದಾಗಾಗಲಿ ಅದರ ವರ್ಣವು ಬದಲಾಗದೇ ಇರುವುದನ್ನು ತೋರಿಸಿದರು. ಇದರಿಂದಾಗಿ ಅವರು ಬಣ್ಣದ ರಚನೆಯು ಮುಂಚೆಯೇ ವರ್ಣಮಯವಾಗಿರುವ ಬೆಳಕಿನೊಡನೆ ವರ್ತಿಸುವುದರಿಂದಾಗಿ ಆಗುವುದೇ ಹೊರತು ವಸ್ತುಗಳು ತಮಗೆ ತಾವೇ ವರ್ಣವನ್ನು ಹೊಂದಿರುವುದಿಲ್ಲ ಎಂಬ ನಿರ್ಣಯಕ್ಕೆ ಬಂದರು. ಇದನ್ನು ನ್ಯೂಟನ್‌ರ ವರ್ಣ ಸಿದ್ಧಾಂತ ಎನ್ನಲಾಗುತ್ತದೆ.

ಈ ಅಧ್ಯಯನದಿಂದ ಯಾವುದೇ ಪ್ರತಿಫಲಿತ ದೂರದರ್ಶಕದ ಮಸೂರವು ಬೆಳಕಿನ ಚದುರುವಿಕೆಯಿಂದಾಗುವ ವರ್ಣಗಳ ಪ್ರಭೆಯ ಸಮಸ್ಯೆ ಎದುರಿಸುತ್ತದೆ ಎಂಬ ನಿರ್ಣಯಕ್ಕೆ ಬಂದರು(ವರ್ಣೋನ್ಮಾದ), ಹಾಗೂ ಇದಕ್ಕೆ ಮಾದರಿಯಾಗಿ ಅವರು ಈ ಸಮಸ್ಯೆಯ ನಿವಾರಕವಾಗಿ ಕನ್ನಡಿಯೊಂದನ್ನು ಬಳಸಿದ ದೂರದರ್ಶಕವನ್ನು ತಯಾರಿಸಿದರು. ವಾಸ್ತವವಾಗಿ ಕಾರ್ಯತಃ ಇಂದಿಗೆ ನ್ಯೂಟೊನಿಯನ್ ದೂರದರ್ಶಕ, ಎಂದು ಖ್ಯಾತವಾಗಿರುವ ಪ್ರತಿಫಲಿತ ದೂರದರ್ಶಕದ ನಿರ್ಮಾಣವು, ಸಮರ್ಪಕ ಕನ್ನಡಿ ವಸ್ತುವಿನ ಗುರುತಿಸುವಿಕೆ ಹಾಗೂ ಆಕಾರ ನೀಡುವ ತಂತ್ರದ ಸಮಸ್ಯೆಯ ಪರಿಹಾರದ ಹುಡುಕಾಟದಲ್ಲಿರುವಾಗ ಆಯಿತು. ನ್ಯೂಟನ್‌ರು ತಮ್ಮ ದೂರದರ್ಶಕಗಳ ದೃಗ್ವಿಜ್ಞಾನ ಗುಣಮಟ್ಟವನ್ನು ನಿರ್ಧರಿಸಲು ನ್ಯೂಟನ್‌ರ ರಿಂಗ್‌‌ಗಳನ್ನು ಬಳಸಿ ಐಚ್ಛಿಕ ಸಂಯೋಜನೆಯ ಹೆಚ್ಚು ಪ್ರತಿಫಲಿಸುವ ಪ್ರತಿಫಲನ ಲೋಹದಿಂದ ಉಜ್ಜಿ ತನ್ನದೇ ರೀತಿಯ ಕನ್ನಡಿಗಳನ್ನು ತಯಾರಿಸಿದರು.

1668ರ ] ಕೊನೆಯಲ್ಲಿ ಪ್ರಥಮ ಪ್ರತಿಫಲಿತ ದೂರದರ್ಶಕ ವನ್ನು ನಿರ್ಮಿಸಲು ಸಾಧ್ಯವಾಯಿತು. 1671ರಲ್ಲಿ ರಾಯಲ್‌ ಸೊಸೈಟಿಯು ಅವರ ಪ್ರತಿಫಲಿತ ದೂರದರ್ಶಕದ ಪ್ರದರ್ಶನವನ್ನು ಕೋರಿತು. ಅವರ ಆಸಕ್ತಿಯು ಅವರನ್ನು ಹುರಿದುಂಬಿಸಿ ಆನ್‌ ಕಲರ್‌ ಎಂಬ ನಿಬಂಧವನ್ನು ಪ್ರಕಟಿಸುವಂತೆ ಮಾಡಿತು, ಅದನ್ನು ನಂತರ ಅವರು ಆಪ್ಟಿಕ್ಸ್‌ ಪುಸ್ತಕ ವಾಗಿ ವಿಸ್ತರಿಸಿದರು. ರಾಬರ್ಟ್‌ ಹುಕ್‌ರು ನ್ಯೂಟನ್‌ರ ಕೆಲ ಆಲೋಚನೆಗಳನ್ನು ಟೀಕಿಸಿದ್ದರಿಂದ, ನ್ಯೂಟನ್‌ರು ಎಷ್ಟು ನೊಂದುಕೊಂಡರೆಂದರೆ ಸಾರ್ವಜನಿಕ ಚರ್ಚೆಯಿಂದಲೇ ಹೊರಗುಳಿದರು.

1679-80ರಲ್ಲಿ, ಹುಕ್‌ರು ರಾಯಲ್‌ ಸೊಸೈಟಿಯ ಪತ್ರವ್ಯವಹಾರದ ನಿರ್ವಾಹಕರೆಂದು ನೇಮಕಗೊಂಡಾಗ ರಾಯಲ್‌ ಸೊಸೈಟಿಯ ವ್ಯವಹಾರಗಳಲ್ಲಿನ ನ್ಯೂಟನ್‌ರ ಪಾತ್ರದ ಬಗ್ಗೆ ಪತ್ರವ್ಯವಹಾರವನ್ನು ಆರಂಭಿಸಿದಾಗ ನ್ಯೂಟನ್‌ ಮತ್ತು ಹುಕ್‌ ಸಣ್ಣ ವಾಗ್ವಾದ ರೂಪದ ವಿಚಾರ ವಿನಿಮಯ ನಡೆಸಿದರು, ಇದರಿಂದಾಗಿ ನ್ಯೂಟನ್‌ರು ಗ್ರಹಗಳ ಕಕ್ಷೆಗಳ ಅಂಡಾಕೃತಿಯು ತ್ರಿಜ್ಯ ಸದಿಶದ ವರ್ಗಕ್ಕೆ ವಿಲೋಮ ಅನುಪಾತದಲ್ಲಿರುವ ಕೇಂದ್ರಗಾಮಿ ಬಲದಿಂದಾಗಿರುತ್ತದೆ ಎಂಬುದನ್ನು ಸಾಕ್ಷ್ಯಾಧಾರಿತವಾಗಿ ನಿರೂಪಿಸುವ (ನ್ಯೂಟನ್‌ರ ಸಾರ್ವತ್ರಿಕ ಗುರುತ್ವಾಕರ್ಷಣೆಯ ನಿಯಮ – ಇತಿಹಾಸ ಮತ್ತು ಡೆ ಮೊಟು ಕಾರ್ಪೊರಂ ಇನ್‌ ಜೀರಂ ಅನ್ನು ನೋಡಿರಿ) ಪ್ರಚೋದನೆಗೆ ಒಳಗಾದರು. ಆದರೆ ಹುಕ್ ರ ಮರಣದವರೆಗೂ ಇಬ್ಬರ ನಡುವಿನ ಬಾಂಧವ್ಯ ಅಷ್ಟೇನೂ ಉತ್ತಮವಾಗಿರಲಿಲ್ಲ.

ನ್ಯೂಟನ್‌ರು ಬೆಳಕು, ಅಂಶಗಳು ಅಥವಾ ಕಣಗಳಿಂದಾಗಿದ್ದು ಸಾಂದ್ರ ಮಾಧ್ಯಮದ ಮೂಲಕ ರಭಸದಿಂದ ಹಾಯಿಸಿದರೆ ವಕ್ರೀಭವಗೊಳ್ಳುತ್ತವೆ ಎಂಬ ವಾದ ಮಂಡಿಸಿದ್ದರು. ಅವರು ಪ್ರತಿಫಲನದ ಪುನರಾವರ್ತಿತ ನಮೂನೆ/ಮಾದರಿಯನ್ನು ಮತ್ತು ತೆಳು ಪದರ/ಫಿಲ್ಮ್‌ (ಆಪ್ಟಿಕ್ಸ್‌ Bk.II, Props. 12),ಗಳ ಮೂಲಕ ಪ್ರಸರಿತಗೊಳ್ಳುವುದನ್ನು ವಿವರಿಸಲು ಶಬ್ದ ಮಾದರಿಯ ತರಂಗಗಳನ್ನು ಬಳಸುವ ಯೋಚನೆಯ ಅಂಚಿನಲ್ಲಿದ್ದರು, ಆದರೂ ಪ್ರೇರಿತ ಕಣಗಳನ್ನು ಪ್ರತಿಫಲಿಸುವಂತೆ ಅಥವಾ ಪಸರಿಸುವಂತೆ(Props.13) ಮಾಡುವ ತಮ್ಮ ‘ಫಿಟ್ಸ್‌’ ಸಿದ್ಧಾಂತವನ್ನು ಉಳಿಸಿಕೊಂಡರು. ನಂತರ ಭೌತವಿಜ್ಞಾನಿಗಳು ಬೆಳಕಿನ ಸಂಪೂರ್ಣವಾಗಿ ತರಂಗಮಾದರಿಯ ವಿವರಣೆಯ ವ್ಯತಿಕರಣ ನಮೂನೆಗಳನ್ನು ಹಾಗೂ ಸಾಮಾನ್ಯ ವಿವರ್ತನೆಯ ಸಂಗತಿಯನ್ನು ವಿವರಿಸಲು ಆದ್ಯತೆ ನೀಡಿದರು. ಇಂದಿನ ಕ್ವಾಂಟಂ ಯಂತ್ರಶಾಸ್ತ್ರದಲ್ಲಿ, ಫೋಟಾನ್‌ಗಳು ಮತ್ತು ತರಂಗ ಕಣದ ಉಭಯತ್ವಗಳು ನ್ಯೂಟನ್‌ರ ಬೆಳಕಿನ ಅರ್ಥೈಸುವಿಕೆಗೆ ಕೇವಲ ಅಲ್ಪ ಪ್ರಮಾಣದ ಹೋಲಿಕೆ ಹೊಂದಿವೆ.

1675ರ ತಮ್ಮ ಬೆಳಕಿನ ಬಗೆಗಿನ ಕಲ್ಪನೆ ಯಲ್ಲಿ, ನ್ಯೂಟನ್‌ರು ಕಣಗಳ ನಡುವೆ ಶಕ್ತಿಯ ರವಾನೆಯಲ್ಲಿ ಈಥರ್‌ನ ಪಾತ್ರವಿದೆ ಎಂಬ ಆಧಾರವನ್ನಿಟ್ಟುಕೊಂಡಿದ್ದರು. ಬ್ರಹ್ಮವಿದ್ಯಾವಾದಿ ಹೆನ್ರಿ ಮೋರ್‌/ಮೂರ್‌ರ ಸಂಪರ್ಕವು ರಸಸಿದ್ಧಾಂತದ ಅವರ ಆಸಕ್ತಿಯನ್ನು ಮರಳಿಸಿತು. ಈಥರ್‌ನ ಬದಲಾಗಿ ಕಣಗಳ ನಡುವಿನ ಆಕರ್ಷಣೆ ಹಾಗೂ ವಿಕರ್ಷಣೆಯ ವಿಚಾರದಲ್ಲಿ ರಸತಂತ್ರದ ಆಲೋಚನಾ ಶೈಲಿಯ ನಿಗೂಢ ಶಕ್ತಿಗಳ ಪ್ರಭಾವವನ್ನು ಕಲ್ಪಿಸಿದರು. ನ್ಯೂಟನ್‌ರ ರಸಸಿದ್ಧಾಂತದ ಬಗೆಗಿನ ಅನೇಕ ಲೇಖನಗಳನ್ನು ಸಂಪಾದಿಸಿದ್ದ ಜಾನ್‌ ಮೇನರ್ಡ್‌ ಕೀನೆಸ್‌ರು ನೀಡಿದ ಹೇಳಿಕೆ ಹೀಗಿತ್ತು “ನ್ಯೂಟನ್‌ರು ಕಾರಣ ಯುಗದ ಮೊದಲಿಗರಲ್ಲ; ಅವರು ಮಾಂತ್ರಿಕ ಯುಗದ ಕೊನೆಯವರು.ನ್ಯೂಟನ್‌ರ ರಸಸಿದ್ಧಾಂತದ ಬಗೆಗಿನ ಆಸಕ್ತಿಯನ್ನು ವಿಜ್ಞಾನಕ್ಕೆ ಅವರ ಕೊಡುಗೆಗಳಿಂದ ಬೇರ್ಪಡಿಸಲು ಸಾಧ್ಯವಿಲ್ಲ; ಆದಾಗ್ಯೂ, ಅವರು ಸ್ಪಷ್ಟವಾಗಿಯೇ ರಸತಂತ್ರದ ಪ್ರಯೋಗಗಳನ್ನು ತ್ಯಜಿಸಿದ್ದರು.[೫] (ಅದು ರಸಸಿದ್ಧಾಂತ ಮತ್ತು ವಿಜ್ಞಾನದ ನಡುವೆ ಸ್ಪಷ್ಟ ಪ್ರತ್ಯೇಕತೆ ಕಂಡುಕೊಂಡಿಲ್ಲದ ಸಮಯವಾಗಿತ್ತು.) ಅವರು ದೂರ ನಿರ್ವಾತದಲ್ಲಿ ಶಕ್ತಿಯ ಪ್ರಭಾವದ ನಿಗೂಢತ್ವವನ್ನು ಅಲಕ್ಷಿಸಿದ್ದಲ್ಲಿ, ಅವರು ತಮ್ಮ ಗುರುತ್ವಾಕರ್ಷಣೆಯ ಸಿದ್ಧಾಂತವನ್ನು ರಚಿಸಲಾಗುತ್ತಿರಲಿಲ್ಲ. (ಇದನ್ನೂ ನೋಡಿ ಐಸಾಕ್‌ ನ್ಯೂಟನ್‌ರ ನಿಗೂಢ ಅಧ್ಯಯನಗಳು.)

1704ರಲ್ಲಿ ನ್ಯೂಟನ್‌ರು ತಮ್ಮ ಬೆಳಕಿನ ಕಣವಾದವನ್ನು ಮಂಡಿಸಿದ್ದ ಆಪ್ಟಿಕ್ಸ್‌ ಪುಸ್ತಕ ವನ್ನು ಪ್ರಕಟಿಸಿದರು. ಅವರು ಬೆಳಕನ್ನು ವಿಪರೀತ ಸೂಕ್ಷ್ಮ ಕಣಗಳಿಂದಾಗಿದೆ, ಹಾಗೂ ಸಾಮಾನ್ಯ ವಸ್ತುವು ಸಾಂದ್ರವಾದ ಕಣಗಳಿಂದಾಗಿದೆ ಎಂಬುದನ್ನು ರಸತಂತ್ರದ ಒಂದು ವಿಧದ ಪರಿವರ್ತನೆಯ ಮೂಲಕ ಊಹಿಸಿದರು “ಸಾಂದ್ರ ಕಾಯಗಳು ಮತ್ತು ಬೆಳಕು ಪರಸ್ಪರ ಪರಿವರ್ತಿತವಾಗಬಲ್ಲವೇ, ಹಾಗೂ ಕಾಯಗಳು ತಮ್ಮ ಸಂಯೋಜನೆಯೊಳಗೆ ಪ್ರವೇಶಿಸಿದ ಬೆಳಕಿನ ಕಣಗಳಿಂದ ಹೆಚ್ಚಿನ ಚಟುವಟಿಕೆಯನ್ನು ಹೊಂದಲಾರವೇ?” ನ್ಯೂಟನ್‌ರು ಘರ್ಷಣಾತ್ಮಕ ಸ್ಥಾಯಿವಿದ್ಯುಜ್ಜನಕದ ಮೂಲ ಮಾದರಿಯನ್ನು ಗಾಜಿನ ಗೋಲವೊಂದನ್ನು ಬಳಸಿ ನಿರ್ಮಿಸಿದರು.

The post ವಿಜ್ಞಾನಿ ಪರಿಚಯ : ಸರ್ ಐಸಾಕ್ ನ್ಯೂಟನ್ ಎಂಬ ಆಲ್‌ರೌಂಡರ್ ವಿಜ್ಞಾನಿ appeared first on Current Affairs Kannada.

]]>
https://currentaffairskannada.com/sir-isaac-newton/feed/ 0
ವಿಜ್ಞಾನಿ ಪರಿಚಯ : ಅಲ್ಬರ್ಟ್ ಐನ್‍ಸ್ಟೈನ್ https://currentaffairskannada.com/albert-einstein/ https://currentaffairskannada.com/albert-einstein/#respond Tue, 15 Dec 2020 17:39:13 +0000 http://www.spardhatimes.com/?p=2389 ಜಗತ್ತಿನಾದ್ಯಂತ ಎಲ್ಲರೂ ಇಷ್ಟಪಡುವ, ಪ್ರೀತಿಸುವ ಒಬ್ಬ ವಿಜ್ಞಾನಿ ಐನ್‌ಸ್ಟೈನ್.ಆಲ್ಬರ್ಟ್ ಐನ್‍ಸ್ಟೀನ್ 20ನೇ ಶತಮಾನದ ಜರ್ಮನಿ ಮೂಲದ ಭೌತವಿಜ್ಞಾನಿ. ಇವರು ಸಾಪೇಕ್ಷತ ಸಿದ್ಧಾಂತವನ್ನು (ಥಿಯರಿ ಆಫ್ ರಿಲೇಟಿವಿಟಿ) ಜಗತ್ತಿನ

The post ವಿಜ್ಞಾನಿ ಪರಿಚಯ : ಅಲ್ಬರ್ಟ್ ಐನ್‍ಸ್ಟೈನ್ appeared first on Current Affairs Kannada.

]]>
ಜಗತ್ತಿನಾದ್ಯಂತ ಎಲ್ಲರೂ ಇಷ್ಟಪಡುವ, ಪ್ರೀತಿಸುವ ಒಬ್ಬ ವಿಜ್ಞಾನಿ ಐನ್‌ಸ್ಟೈನ್.ಆಲ್ಬರ್ಟ್ ಐನ್‍ಸ್ಟೀನ್ 20ನೇ ಶತಮಾನದ ಜರ್ಮನಿ ಮೂಲದ ಭೌತವಿಜ್ಞಾನಿ. ಇವರು ಸಾಪೇಕ್ಷತ ಸಿದ್ಧಾಂತವನ್ನು (ಥಿಯರಿ ಆಫ್ ರಿಲೇಟಿವಿಟಿ) ಜಗತ್ತಿನ ಮುಂದಿಟ್ಟವರು. ಈತ ಹುಟ್ಟಿದ್ದು ಜರ್ಮನಿಯ ಉಲ್ಮ್ ನಲ್ಲಿ. ಇಸವಿ 1879, ಮಾರ್ಚ್ 14ನೇ ತಾರೀಖಿನಂದು ಹುಟ್ಟಿದ್ದ ಐನ್‌ಸ್ಟೈನ್ ಮಾರು 5 ವರ್ಷಗಳವರೆಗೆ ಮಾತನಾಡುತ್ತಿರಲಿಲ್ಲ. ಅಂದರೆ ಮೂಗನಾಗಿದ್ದ.! ನಿಧಾನವಾಗಿ ಮಾತು ಆರಂಭಿಸಿದ ಐನ್‌ಸ್ಟೈನ್ಗೆ ಮಾತಿನ ಸಮಸ್ಯೆ 9 ವರ್ಷಗಳವರೆಗೂ ಇತ್ತು.ಈ ಕಾರಣದಿಂದ ಐನ್‌ಸ್ಟೈನ್ ಹೆಚ್ಚು ಮೌನಿಯಾಗಿರುತ್ತಿದ್ದ, ಭಾವನೆಗಳನ್ನು ಹೊರ ಹಾಕಲು ಆತನ ಬಳಿ ದಾರಿಗಳಿರಲಿಲ್ಲ. ಈ ಕಾರಣಕ್ಕೆ ಆಲೋಚನೆ ಮಾಡುವ ಅಭ್ಯಾಸ ಐನ್‌ಸ್ಟೈನ್ಗೆ ಬೆಳೆದಿರಬಹುದು ಎಂಬ ಮಾತುಗಳಿವೆ. ಇಂತಹ ರೋಚಕ ವಿಷಯಗಳನ್ನು ಹೊಂದಿರುವ ಅಲ್ಬರ್ಟ್ ಐನ್ ಸ್ಟೈನ್ ಅವರ ಇವರ ಜೀವನಗಾಥೆ ಖಂಡಿತವಾಗಿಯೂ ಒಂದು ಕುತೂಹಲಕಾರಿಯಾದ ವಿಷಯ.

ಇಸಾಕ್ ನ್ಯೂಟನ್ ನ ಸಿದ್ಧಾಂತವನ್ನು ಮತ್ತಷ್ಟು ಉತ್ತಮಪಡಿಸಿ, ಭೌತಶಾಸ್ತ್ರೀಯ ಸಂಶೋಧನೆಯ ಜಗತ್ತಿನಲ್ಲಿ ಮಹತ್ವದ ಮೈಲುಗಲ್ಲುಗಳನ್ನು ಸ್ಥಾಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಭೌತಶಾಸ್ತ್ರದ ಕಡೆ, ಅವರ ಒಲವು ಅಪಾರ, ಬುದ್ಧಿಮತ್ತೆ, ಹಾಗೂ ಕಾರ್ಯತತ್ಪರತೆ, ಒಂದು ಹೊಸಲೋಕವನ್ನೇ ಅವರ ಮುಂದೆ ತೆರೆದಿಟ್ಟಿತು. ತೊದಲು ನುಡಿಯುತ್ತಿದ್ದ ಬಾಲಕ, ಸಂಶೋಧನಶೀಲತೆಯಂತಹ ಅದ್ವಿತೀಯ, ಗುಣಗಳಿಂದ , ಶ್ರೇಷ್ಠ ಪ್ರಾಧ್ಯಾಪಕನಾದದ್ದು, ಅಪೂರ್ವ ಸಂಶೋಧಕನಾದದ್ದೂ, ಚಾರಿತ್ರ್ಯಕ ಸತ್ಯ.

1915. ನೂರು ವರ್ಷಗಳ ಹಿಂದಿನ ಮಾತು. ಇದು ವಿಜ್ಞಾನಕ್ಕೇ ವಿಶೇಷವಾದ ವರ್ಷ. ಇಂತಹ ಪ್ರಖರ ಪ್ರತಿಭಾವಂತ ಇನ್ನೊಬ್ಬನಿಲ್ಲ ಎನಿಸಿದ್ದ ಯೂರೋಪಿನ ಪ್ರಸಿದ್ಧ ಭೌತವಿಜ್ಞಾನಿ ಆಲ್ಬರ್ಟ್‍ ಐನ್‌ಸ್ಟೈನ್ (1879 – 1955) ಜನರ ನಂಬಿಕೆಗಳನ್ನೇ ಅಲ್ಲಾಡಿಸಿದ್ದು ಇದೇ ವರ್ಷ. ಹಾಗಾಗಿ ಮಾನವಜನಾಂಗದ ಇತಿಹಾಸದಲ್ಲಿ ಈ ವರ್ಷಕ್ಕೆ ಬಹಳ ಮಹತ್ವವಿದೆ.

ಈ ಅತಿ ಮಹತ್ವದ ಅವರ ‘ವಿಶೇಷ ಸಾಪೇಕ್ಷ ಸಿದ್ಧಾಂತ’ 1905ರಲ್ಲಿಯೇ ಹೊರಬಂದಿತ್ತು. ಕೇವಲ ಒಂದು ವರ್ಷದಲ್ಲಿ ಐದು ಪೇಪರುಗಳನ್ನು ಪ್ರಕಟಿಸಿದ್ದರು. ಆಗ ಅವರ ವಯಸ್ಸು ಕೇವಲ 26. ಈ ಪೇಪರುಗಳಲ್ಲಿ ಒಂದು ‘ವಿಶೇಷ ಸಾಪೇಕ್ಷ ಸಿದ್ಧಾಂತ’ಕ್ಕೆ (Special Theory of Relativity) ಸಂಬಂಧಿಸಿದ್ದಾದರೆ, ಮತ್ತೊಂದು ಫೋಟೋ ಎಲೆಕ್ಟ್ರಿಕ್‌ ಕ್ರಿಯೆಗೆ ಸಂಬಂಧಿಸಿದ್ದು. ಅದು ಮುಂದೆ ಅವರಿಗೆ ನೊಬೆಲ್ ಬಹುಮಾನ ತಂದುಕೊಟ್ಟಿತು. ಮತ್ತೊಂದು ಪೇಪರ್ ಪ್ರಖ್ಯಾತ ‘e=mc2’ ಸಮೀಕರಣವನ್ನು ಹೊರತಂದು ಅವರನ್ನು ಬಾಂಬ್ ಜೊತೆ ಅನಗತ್ಯವಾಗಿ ಶಾಮೀಲಾಗುವಂತೆ ಮಾಡಿತು.

# ಜನ ಮತ್ತು ಬಾಲ್ಯ :
ಐನ್‍ಸ್ಟೈನ್, ಜನಿಸಿದ್ದು ಜರ್ಮನಿಯ ವುಟೆನ್ ಬರ್ಗ್ ನ ಉಲ್ಮ್ ಎಂಬ ಹಳ್ಳಿಯಲ್ಲಿ. 1879 ರ ಮಾರ್ಚ್ 14ರಂದು. ತಂದೆ, ಹರ್ಮನ್ ಐನ್‍ಸ್ಟೈನ್. ತಾಯಿ, ಪೌಲಿನ್ ಐನ್‍ಸ್ಟೈನ್. ಬಾಲ್ಯದಲ್ಲಿ ಅವರನ್ನು ಕಾಡಿದ ಸಮಸ್ಯೆಯೆಂದರೆ ತೊದಲುವಿಕೆ. ಮನೆಯ ಸದಸ್ಯರಿಗೆಲ್ಲಾ ಬಹಳ ನೊಂದುಕೊಂಡಿದ್ದರು. ತಮ್ಮ ಜರ್ಮನ್ ಮಾತೃಭಾಷೆಯನ್ನು ಚೆನ್ನಾಗಿ ಕಲಿತರು. ಮ್ಯುನಿಕ್ ನಲ್ಲಿ ಮನೆತನದ ಎಲೆಕ್ಟ್ರಿಕಲ್ ಉಪಕರಣಗಳ ತಯಾರಿಕೆಯ ಸಂಸ್ಥೆಯನ್ನು ತಂದೆ ಹಾಗೂ ಚಿಕ್ಕಪ್ಪನವರು ಸೇರಿ ಸ್ಥಾಪಿಸಿದ್ದರು. ಪರಿವಾರವೆಲ್ಲಾ ಇಟಲಿಗೆ ಹೋಗಿ ನೆಲೆಸುವ ಆತುರದಲ್ಲಿತ್ತು. ಅಗ ಐನ್‍ಸ್ಟೈನ್ ರವರಿಗೆ 6 ವರ್ಷ ವಯಸ್ಸು. ಐನ್‍ಸ್ಟೈನ್ ಝೂರಿಚ್ ನ “ಸ್ವಿಸ್ ಫೆಡರಲ್ ತಾಂತ್ರಿಕ ಸಂಸ್ಥೆ”ಗೆ ಅರ್ಜಿ ಸಲ್ಲಿಸಿದರು. ಅವರ ಬಳಿ ಸೆಕೆಂಡರಿಶಾಲೆಯ ಪ್ರಮಾಣಪತ್ರವಿರಲಿಲ್ಲ. 16 ವರ್ಷವಯಸ್ಸಿನ ಐನ್‍ಸ್ಟೈನ್ ಪ್ರವೇಶ ಪರೀಕ್ಷೆಯಲ್ಲಿ ನಾಪಾಸಾದರು.

ಸೆಕೆಂಡರಿ ವಿಧ್ಯಾಭ್ಯಾಸಕ್ಕೆ ‘ಹ್ಯಾರೋ’ ಸ್ಕೂಲಿಗೆ ಹೋಗಿ ಭರ್ತಿಯಾದರು. “ವಿದ್ಯುತ್‍ಕಾಂತೀಯ ಸಿದ್ಧಾಂತ” ( ಎಲೆಕ್ಟ್ರೋ ಮ್ಯಾಗ್ನೆಟಿಕ್ ಸಿದ್ಧಾಂತ)ದಲ್ಲಿ ವಿಶೇಷ ಆಸಕ್ತಿ ಬೆಳೆಯಿತು. 1896 ರಲ್ಲಿ ಪದವಿ ದೊರೆಯಿತು. ಐನ್‍ಸ್ಟೈನ್ ರಿಗೆ ಗಣಿತಶಾಸ್ತ್ರದಲ್ಲಿ ವಿಶೇಷಪರಿಣತಿ ಇದೆ ಎನ್ನುವ ಸತ್ಯ ಅರಿವಾಗಿದ್ದು ಆನಂತರವೇ. 1900 ರಲ್ಲಿ ಭೌತಶಾಸ್ತ್ರದಲ್ಲಿ ಪದವಿ ಸಿಕ್ಕಿತು. 1901 ರಲ್ಲಿ “ಸ್ವಿಸ್ ಪೌರತ್ವ”ವನ್ನು ಪಡೆದುಕೊಂಡರು. ಜರ್ಮನ್ ಇಟ್ಯಾಲಿಯನ್ ಭಾಷೆಗಳ ಜೊತೆಗೆ ಆಂಗ್ಲ ಭಾಷೆಯನ್ನು ಚೆನ್ನಾಗಿ ಅಭ್ಯಾಸಮಾಡಿದರು. ಉಪಾಧ್ಯರ ವೃತ್ತಿಗೆ ಅರ್ಜಿಹಾಕಿ 2 ವರ್ಷ ಅಲೆದಲೆದು ಸೋತುಹೋದರು. ನೌಕರಿ ಸಿಗುವುದು ಕಠಿಣವಾಗಿತ್ತು. ಕೊನೆಗೆ ‘ಬರ್ನ್’ ನಗರದ “ಪೇಟೆಂಟ್ ಆಫೀಸ್”ನಲ್ಲಿ ಕೆಲಸ ದೊರೆಯಿತು.

ಐನ್‍ಸ್ಟೈನ್ ಗೆ ಭೌತಶಾಸ್ತ್ರದಲ್ಲಿ ಅಗಾಧ ಪರಿಶ್ರಮವಿತ್ತು. ಅವರ ವ್ಯವಸಾಯವೂ ಆ ನಿಟ್ಟಿನಲ್ಲೇ ಭರದಿಂದಲೇ ಸಾಗಿತ್ತು. “ಅನಾಲೆಂಡರ್ ಫಿಸಿಕ್”ಎಂಬ ಜರ್ಮನಿಯ ಪ್ರತಿಶ್ಠಿತ ಭೌತಶಾಸ್ತ್ರದ ಪತ್ರಿಕೆಗೆ ತಮ್ಮ ಪ್ರಬಂಧವನ್ನು ಪ್ರಕಟಿಸಲು ಕಳಿಸಿಕೊಟ್ಟರು. ಇವರ ಪ್ರಗತಿಪರ ಸಂಶೋಧನಾ ತತ್ವಗಳು ಭೌತಶಾಸ್ತ್ರದ ವಲಯದಲ್ಲಿ ಎಲ್ಲರ ಗಮನವನ್ನೂ ಸೆಳೆದವು. ತಮ್ಮ 26 ನೆಯ ವರ್ಷ ವಯಸ್ಸಿನಲ್ಲೇ ಡಾಕ್ಟೊರೇಟ್ ಗಳಿಸಿದರು. 1911 ರಲ್ಲಿ ಜುರಿಚ್ ನಗರದ ವಿಶ್ವವಿದ್ಯಾಲಯದಲ್ಲಿ ಸಹ-ಪ್ರಾಧ್ಯಾಪಕವೃತ್ತಿ ಸಿಕ್ಕಿತು.

‘ಮಿಲೆವಾ ಮ್ಯಾರಿಕ್’ ಎಂಬ ಜರ್ಮನ್ ಹುಡುಗಿಯ ಜೊತೆ 1903 ರಲ್ಲಿ ಮದುವೆಯಾಯಿತು. ಹಾನ್ಸ್ ಮತ್ತು ಎಡ್ವರ್ಡ್ ಎಂಬ ಎರಡುಮಕ್ಕಳು ಜನಿಸಿದರು. ವಿವಾಹದ ಮೊದಲೆ ಒಬ್ಬ ಮಗಳು ಜನಿಸಿದ್ದಳು. ಆ ಮದುವೆ ವಿವಾಹ ವಿಚ್ಛೇದನೆಯಲ್ಲಿ ಕೊನೆಗೊಂಡಿತು. 1919 ರಲ್ಲಿ ಎಲ್ಯಾ ಲೊವೆಂಥಾಲ್ ಎಂಬ ಮಹಿಳೆಯಜೊತೆ ಮರುಮದುವೆಯಾದರು. ಐನ್‍ಸ್ಟೈನ್ ರ ನೆರಳಿನಂತೆ ಅವರ ಬಾಳಿನಲ್ಲಿ ಸಮರಸ ಹೊಂದಿಸಿದ ಎಲ್ಯಾ, ಖಾಯಿಲೆಯಿಂದ ಬಳಲಿ, 1936 ರಲ್ಲಿ ಅಸುನೀಗಿದರು.

# ಐನ್‍ಸ್ಟೈನ್ ಜೀವನದ ಅವಿಸ್ಮರಣೀಯ ಘಟನೆ :
42 ವರ್ಷವಯಸ್ಸಿನ ಐನ್‍ಸ್ಟೈನ್ ರವರಿಗೆ ಫೊಟೊ ಎಲೆಕ್ಟ್ರಿಕಲ್ ಎಫೆಕ್ಟ್(ದ್ಯುತಿವಿದ್ಯುತ್ ಪರಿಣಾಮ) ಎಂಬ ಮಹಾಪ್ರಬಂಧವನ್ನು ಮಂಡಿಸಿದ್ದಕ್ಕೆ ನೊಬೆಲ್ ಪ್ರಶಸ್ತಿ ದೊರೆಯಿತು. ಅವರ ಪ್ರಶಸ್ತಿಯ ಬಹುಪಾಲು ನಗದುಹಣವೆಲ್ಲಾ ಅವರ ಪತ್ನಿಯ ವಿವಾಹವಿಚ್ಛೇದನದ ಪರಿಹಾರಧನ ಕೊಡುವುದರಲ್ಲೇ ವ್ಯಯವಾಯಿತು. ಆಗ ಜರ್ಮನಿಯ ಯಹೂದ್ಯರಿಗೆ ಹಿಟ್ಲರ್ ನ ಕಿರುಕುಳ ಶುರುವಾಗಿತ್ತು. 1921 ರಲ್ಲಿ ಪ್ರಥಮವಾಗಿ ನ್ಯೂಯಾರ್ಕ್ ಗೆ ಭೇಟಿಕೊಟ್ಟರು. ಮನೆ ಖರೀದಿಸಿದರು.

1940 ರಲ್ಲಿ ಅಮೆರಿಕದ ಪೌರತ್ವ ಪಡೆದ ಅವರು, ತಮ್ಮ ಜೀವನದ ಶೇಷಭಾಗವನ್ನು ಅಲ್ಲೇ ಕಳೆದರು. 2ನೇ ವಿಶ್ವ ಸಮರದ ಸಮಯದಲ್ಲಿ ಅಣುಬಾಂಬ್, ನ ಹಾನಿಕರ ಪರಿಣಾಮಗಳನ್ನು ಜನರಿಗೆಲ್ಲಾ ಪ್ರಸಾರ ಮಾಡುತ್ತಿದ್ದರು. ಆ ಸಮಯದಲ್ಲಾಗಲೇ ಹಿಟ್ಲರ್ ಆಡಳಿತದಲ್ಲಿದ್ದ ಜರ್ಮನಿಯು ಅಣ್ವಸ್ತ್ರಕ್ಕಾಗಿ ಪೈಪೋಟಿ ನೆಡೆಸುತಿತ್ತು. 1939ರಲ್ಲಿ ಲಿಯೋ ಸಿಲ್ಲಾರ್ಡ್ ಎಂಬ ವಿಜ್ಞಾನಿಯನ್ನು ಒಳಗೊಂಡಿದ್ದ ಹಂಗೇರಿಯ ವಿಜ್ಞಾನಿಗಳ ಗುಂಪೊಂದು ನಾಜಿಗಳ ಈ ಕೃತ್ಯದ ಬಗ್ಗೆ ಅಮೆರಿಕವನ್ನು ಎಚ್ಚರಿಸಲು ಯತ್ನಿಸುತ್ತಿದ್ದರು.

ಪರಮಾಣು ವಿದಳನ ಕ್ರಿಯೆಯ ಹಿಂದಿದ್ದ ಸಿದ್ಧಾಂತವನ್ನು ತಿಳಿದಿದ್ದ ಲಿಯೋ ಸಿಲ್ಲಾರ್ಡ್ ಹಾಗೂ ಯೂಜಿನ್ ವಿಜಿನರ್ ಎಂಬ ವಿಜ್ಞಾನಿಗಳು ಈ ಬಗ್ಗೆ ಐನ್‍ಸ್ಟೈನ್ ರನ್ನು ಜುಲೈ 9, 1939ರಂದು ಭೇಟಿಮಾಡಿದರು. ಐನ್‍ಸ್ಟೈನ್ ರವರು ಸಿಲ್ಲಾರ್ಡ್ ಜೊತೆ ಸೇರಿ ಅಣ್ವಸ್ತ್ರದ ಸಾಧ್ಯತೆಯನ್ನು ವಿವರಿಸಿ ಆಗಿನ ಅಮೆರಿಕದ ಅಧ್ಯಕ್ಷರಾಗಿದ್ದ ರೂಸ್ವೆಲ್ಟ್ ಅವರಿಗೆ ಪತ್ರ ಬರೆದರು.

ಅಮೆರಿಕದ ವಿಜ್ಞಾನಿಗಳು, ಅಣುಬಾಂಬನ್ನು ತಯಾರಿಸಿ, ಜಪಾನ್ ನ ನಾಗಸಾಕಿ, ಮತ್ತು ಹಿರೋಷಿಮಾ ನಗರಗಳ ಮೇಲೆ ಎಸೆದದ್ದರಿಂದ, ಸಹಸ್ರಾರು ಜನರ ಪ್ರಾಣವನ್ನು ಆಹುತಿಯನ್ನಾಗಿ ತೆಗೆದುಕೊಂಡಿತ್ತು. ಈ ಘಟನೆಯಿಂದ ಘಾಸಿಗೊಂಡಿದ್ದ ಐನ್‍ಸ್ಟೈನ್ ರು, ಎಲ್ಲಾ ವಿಜ್ಞಾನಿಗಳಿಗೂ ಕರೆಕೊಟ್ಟು, ಅಣುವಿಜ್ಞಾನವನ್ನು ಜಾಗತಿಕ ಶಾಂತಿ, ಹಾಗೂ ಮಾವವನ ಒಳಿತಿಗಾಗಿಯೇ ಉಪಯೋಗಿಸಲು ಬಿನ್ನವಿಸಿಕೊಂಡರು.

# ಶತಮಾನದ ಮಹಾವಿಜ್ಞಾನಿಯ :
ಸನ್. 2000 ದಲ್ಲಿ, ಪ್ರಖ್ಯಾತ “ಟೈಮ್ಸ್ ಪತ್ರಿಕೆ,”ಯ 20 ನೆಯ ಶತಮಾನದ ಅತ್ಯಂತ ಪ್ರಖ್ಯಾತ ವ್ಯಕ್ತಿಯನ್ನು ನಿರ್ಧರಿಸುವಲ್ಲಿ ನಡೆಸಿದ ವಿಶ್ವದಾದ್ಯಂತದ ಸಮೀಕ್ಷೆಯಲಿ, ‘ಐನ್‍ಸ್ಟೈನ್ ,’ ರೇ ಪ್ರಚಂಡ ಬಹುಮತದಿಂದ ಚುನಾಯಿತರಾದರು. ಐನ್‍ಸ್ಟೈನ್ , ತಮ್ಮ ನಾಲ್ಕೂವರೆ ದಶಕಗಳ ಸೇವೆ, ವೃತ್ತಿಗೌರವಗಳಿಂದ, ಮನುಕುಲದ ಒಳಿತಿಗಾಗಿ ಮಾಡಿದ ಸೇವೆಗಳನ್ನು ಜನಸ್ತೋಮ, ಸ್ಮರಿಸಿತು. ಅದಕ್ಕಾಗಿಯೇ ಅವರಿಗೆ ಅಗ್ರಸ್ಥಾನ ! ಐನ್‍ಸ್ಟೈನ್ ರವರಿಗೆ ದೊರೆತ ಗೌರವ ಪ್ರಶಸ್ತಿಗಳು, ಅಸಂಖ್ಯ.

# ವಿಶ್ವವಿಖ್ಯಾತ ಸಮೀಕರಣ : E=mc2
1916ರಲ್ಲಿ ಸಾಮಾನ್ಯ ಸಾಪೇಕ್ಷತಾ ಸಿದ್ಧಾಂತ (ಜನರಲ್ ರಿಲೇಟಿವಿಟಿ ಥಿಯರಿ) ಬಿತ್ತರಿಸಿದ ನಂತರ ಐನ್‍ಸ್ಟೈನ್ ವಿಶ್ವದಾದ್ಯಂತ ವಿಜ್ಞಾನಿಯೊಬ್ಬರಿಗೆ ಅಸಾಮಾನ್ಯವಾದ ಪ್ರಸಿದ್ಧಿಯನ್ನು ಪಡೆದರು. ವರ್ಷಗಳು ಕಳೆದಂತೆ ಇವರ ಪ್ರಸಿದ್ಧಿ ಜಗತ್ತಿನ ಯಾವುದೇ ವಿಜ್ಞಾನಿಗಿಂತ ಹೆಚ್ಚಾಯಿತು. ಜಗತ್ತಿನ ಅತಿ ದೊಡ್ಡ ಮೇಧಾವಿಯಾಗಿ ಚಿರಪರಿಚಿತರಾದರು. ಇಂದಿಗೂ ಭೌತಶಾಸ್ತ್ರ ಕ್ಷೇತ್ರದಲ್ಲಿ ಐನ್‍ಸ್ಟೈನ್ ಅವರು ಮಾಡಿರುವ ಸಂಶೋಧನೆಗಳಿಂದ,ಅವರನ್ನು “ಭೌತಶಾಸ್ತ್ರದ ಜನಕ” ಎಂದೇ ವಿಜ್ಞಾನಿಗಳು ಗೌರವಿಸುತ್ತಾರೆ. ಅವರನ್ನು ಗೌರವಿಸುವ ಸಲುವಾಗಿ ಮೂಲ ವಸ್ತುವೊಂದಕ್ಕೆ ‘ಐನ್‍ಸ್ಟೈನಿಯಮ್’ ಎಂದು ಹೆಸರಿಡಲಾಗಿದೆ.

# ‘ಗಾಡ್​​ ಲೆಟರ್’
ಎರಿಕ್​​ ಗಟ್​​ಕೈಂಡ್ ಅವರು ‘ಚೂಸ್ ಲೈವ್: ದಿ ಬಿಬ್ಲಿಕಲ್ ಕಾಲ್ ಟು ರಿವೋಲ್ಟ್’ ಪುಸ್ತಕದ ಪ್ರತಿಯನ್ನು ಐನ್‌ಸ್ಟೀನ್‌ಗೆ ಕಳಿಸಿದ್ದರು. ಇದಕ್ಕೆ ಪತ್ರದ ಮೂಲಕ ಐನ್‌ಸ್ಟೀನ್ ಪ್ರತಿಕ್ರಿಯಿಸಿದ್ದರು. ವಿಜ್ಞಾನ ಹಾಗೂ ಧರ್ಮದ ನಡುವೆ ಚರ್ಚೆ ಬಂದಾಗಲೆಲ್ಲಾ ಈ ಪತ್ರ ಪ್ರಾಮುಖ್ಯತೆ ಪಡೆಯುತ್ತಿತ್ತು. ದೇವರು ಅನ್ನೋ ಪದ, ಮಾನವನ ದೌರ್ಬಲ್ಯಗಳ ಅಭಿವ್ಯಕ್ತಿ ಹಾಗೂ ಉತ್ಪನ್ನವಿದ್ದಂತೆ ಎಂದು ಐನ್‌ಸ್ಟೀನ್ ಅಭಿಪ್ರಾಯಪಟ್ಟಿದ್ದನ್ನು ಗಾಡ್ ಲೆಟರ್ ಎಂದು ಕರೆಯಲಾಗಿದೆ.ಅವರು ಬರೆದ ಈ ಪತ್ರವು ಬರೋಬ್ಬರಿ 2.9 ಮಿಲಿಯನ್​ ಡಾಲರ್​( ಸುಮಾರು 20,58,56,500 ರೂ. )ಗೆ ಹರಾಜಾಗಿ ಆಶ್ಚರ್ಯ ಮೂಡಿಸಿತ್ತು.

# ಐನ್ ಸ್ಟೈನ್ ಕುರಿತ ಕುತೂಹಲಕಾರಿ ಸಂಗತಿಗಳು :
➤ ‘ನಿಮ್ಮನ್ನು ಪತ್ನಿಯಾಗಿ ಸ್ವೀಕರಿಸುತ್ತಿರುವುದಕ್ಕೆ ನನಗೆ ತುಂಬಾ ಸಂತೋಷವಾಗುತ್ತಿದೆ. ನೀವು ನನ್ನ ಅರ್ಧಾಂಗಿಯಾಗುತ್ತಿರುವುದು ನನ್ನ ಸೌಭಾಗ್ಯ ಎಂದು ಭಾವಿಸುತ್ತೇನೆ..’ 1900ರಲ್ಲಿ ವಿಶ್ವ ವಿಖ್ಯಾತ ಭೌತಶಾಸ್ತ್ರಜ್ಞ, ವಿಜ್ಞಾನಿ ಅಲ್ಬರ್ಟ್ ಐನ್‍ಸ್ಟೈನ್ ತಮ್ಮ ಭಾವಿ ಪತ್ನಿ ಮಿಲೆವಾ ಮಾರಿಕ್ ಅವರಿಗೆ ಬರೆದ ಪತ್ರವಿದು.ಅಸಲಿಗೆ ಮಿಲೆವಾ ಮಾರಿಕ್ ಕೂಡ ಭೌತಶಾಸ್ತ್ರಜ್ಞೆಯಾಗಿದ್ದು, “Einstein’s Wife: The Real Story of Mileva Einstein-Maric,” ಎಂಬ ಪುಸ್ತಕದಲ್ಲಿ ಮಿಲೆವಾ ಕುರಿತು ಹಲವು ಕುತೂಹಲಕಾರಿ ಅಂಶಗಳಿವೆ.

➤ ಐನ್‍ಸ್ಟೈನ್ ಅವರ ಪ್ರಸಿದ್ಧ ‘Theory of Relativity’ ಸಿದ್ಧಾಂತ ಮಂಡಿಸುವಲ್ಲಿ ಪತ್ನಿ ಮಿಲೆವಾ ಕೂಡ ನೆರವಾಗಿದ್ದರು ಎಂದು ಈ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ. ಭೌತಶಾಸ್ತ್ರದ ಕುರಿತು ಐನ್‍ಸ್ಟೈನ್ ಅವರಿಗಿಂತ ಆಳವಾದ ಜ್ಞಾನ ಹೊಂದಿದ್ದ ಮಿಲೆವಾ, ‘Theory of Relativity’ ರಚನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು ಎನ್ನಲಾಗಿದೆ.

➤ ಐನ್‌ಸ್ಟೈನ್ ಎನ್ನುವ ಪದ ಜೀನಿಯಸ್ ಎನ್ನುವುದಕ್ಕೆ ಪರ್ಯಾಯ ಎಂದು ಕರೆಸಿಕೊಂಡಿದೆ. ಐನ್‌ಸ್ಟೈನ್ ಒಟ್ಟಾರೆ ತಮ್ಮ ಜೀವಿತಾವಧಿಯಲ್ಲಿ ಐನ್‌ಸ್ಟೈನ್‌ 300ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳು ಮತ್ತು ಇತರ 150 ಕ್ಕೂ ಹೆಚ್ಚು ಪ್ರಬಂಧಗಳನ್ನು ಬರೆದಿದ್ದಾರೆ. ಭಾರತದ ಸತ್ಯೇಂದ್ರನಾಥ್ ಬೋಸ್ ಜೊತೆಗೂಡಿ ನೀಡಿದ ‘ಬೋಸ್-ಐನ್‌ಸ್ಟೈನ್‌ ಸ್ಟಾಟಿಸ್ಟಿಕ್ಸ್’ ಸೇರಿದಂತೆ ‘ಐನ್‌ಸ್ಟೈನ್‌ ರೆಫ್ರಿಜರೇಟರ್’, ‘ಐನ್‌ಸ್ಟೈನ್‌-ಕಾರ್ಟನ್ ಸಿದ್ಧಾಂತ’, ‘ಐನ್‌ಸ್ಟೈನ್‌-ಇನ್ಫೆಲ್ಡ್-ಹಾಫ್ಮನ್ ಇಕ್ವೇಷನ್ಸ್’, ‘ಐನ್‌ಸ್ಟೈನ್‌-ಪೊಡೊಲೊಸ್ಕಿ-ರೋಸೆನ್ ಪ್ಯಾರಾಡಾಕ್ಸ್’ ಇವುಗಳಲ್ಲಿ ಪ್ರಮುಖವಾದವು.

➤ ಐನ್‌ಸ್ಟೈನ್‌ ಹಾದಿಯಲ್ಲಿ ನಡೆಯಬೇಕು ಎಂದು ಎಲ್ಲರೂ ಅಂದುಕೊಳ್ಳುತ್ತಾರೆ. ಅದಕ್ಕಾಗಿ ಯಶಸ್ಸಿಗೆ ಸೂತ್ರಗಳೇನಾದರೂ ಇವೆಯೋ ಎಂದು ಅವರ ಬಳಿ ಕೇಳುತ್ತಿದ್ದರು. ಅದಕ್ಕೆ ಐನ್‌ಸ್ಟೈನ್‌ ಒಂದು ಫಾರ್ಮುಲಾ ನೀಡುತ್ತಿದ್ದರು ಅದು ಹೀಗಿತ್ತು, A = X+Y+Z. ಐನ್‌ಸ್ಟೈನ್‌ ಪ್ರಕಾರ ಇಲ್ಲಿ A ಅಂದರೆ ಯಶಸ್ಸು, ಅದಕ್ಕೆ ಬೇಕಾಗಿದ್ದು X- ಕೆಲಸ, Y-ಆಟ ಮತ್ತು Z-ಬಾಯಿ ಮುಚ್ಚಿಕೊಂಡಿರಬೇಕು ಎನ್ನುತ್ತಿದ್ದರು.

➤ ಮಾರ್ಚ್ 14 ರಂದು ಐನ್ ಸ್ಟೀನ್ ಅವರ ಹುಟ್ಟುಹಬ್ಬದ ಅಂಗವಾಗಿ ಇಸ್ರೇಲ್ ದೇಶದ ಜೆರುಸಲೆಮ್ ಹೀಬ್ರೂ ವಿಶ್ವವಿದ್ಯಾಲಯದವರು ಅವರ 80 ಸಾವಿರಕ್ಕೂ ಹೆಚ್ಚು ಸಂಶೋಧನಾ ಹಾಗು ಅಪರೂಪದ ಪ್ರೇಮ ಪತ್ರಗಳನ್ನು ವೆಬ್ಸೈಟ್ನಲ್ಲಿ ಪ್ರಕಟಿಸಿದ್ದಾರೆ.

➤ ಅಲ್ಬರ್ಟ್ ಅವರು 5 ವರ್ಷದವರಿದ್ದಾಗ ಅವರ ತಂದೆಯಿಂದ ಪಾಕೆಟ್ ದಿಕ್ಸೂಚಿಯನ್ನು ಅವರು ನೋಡಿದರು. ವಿಜ್ಞಾನದೆಡೆಗೆ ಅವರ ಕುತೂಹಲಕ್ಕೆ ಕಾರಣವಾಗಿರುವ ಮೊದಲ ಅಂಶ ಇದು ಎಂದು ಅಲ್ಬರ್ಟ್ ಐನ್ ಸ್ಟೈನ್ ಹೇಳಿಕೊಂಡಿದ್ದಾರೆ. ಪಾಕೆಟ್ ದಿಕ್ಸೂಚಿಯನ್ನು ಯಾವ ದಿಕ್ಕಿಗೆ ಹಿಡಿದರೂ ಅದು ಒಂದೇ ರೀತಿಯಲ್ಲಿ ತೋರಿಸುತ್ತಿರುವುದು ಇದಕ್ಕೆ ಕಾರಣವಾಗಿತ್ತು.

➤ ಅಧ್ಭುತ ಸಂಶೋಧನೆಯ ಹೊರತಾಗಿಯೂ ಐನ್‌ಸ್ಟೈನ್‌ಗೆ ಸಾಪೇಕ್ಷ ಸಿದ್ಧಾಂತಕ್ಕೆ ನೋಬೆಲ್ ಪ್ರಶಸ್ತಿ ಸಿಗಲೇ ಇಲ್ಲ. ಏಕೆಂದರೆ, , ಸಾಪೇಕ್ಷ ಸಿದ್ಧಾಂತ ನೊಬೆಲ್ ಸಮಿತಿಯವರಿಗೂ ಅರ್ಥವಾಗಿರಲಿಲ್ಲ. ಇದರ ಬದಲಾಗಿ ಇದರ ಮುಂದೆ ಚಿಲ್ಲರೆ ಎನಿಸಬಹುದಾದ ‘ಫೋಟೋ ಎಲೆಕ್ಟ್ರಿಕ್ ಇಫೆಕ್ಟ್’ಗೆ ಅದೂ 16 ವರ್ಷ ಬಿಟ್ಟು 1921ರಲ್ಲಿ ನೊಬೆಲ್ ಪ್ರಶಸ್ತಿ ನೀಡಲಾಯಿತು. ವಿಚಿತ್ರ ಎಂದರೆ ಅವರ ಕೆಲವು ಥಿಯರಿಗಳು ಸಾಕ್ಷವಿಲ್ಲದೇ ಹಾಗೇ ಉಳಿದುಕೊಂಡಿದ್ದವು. ಅವು ಸತ್ಯವೋ ಸುಳ್ಳೋ ಎಂದು ಹೇಳಲು ಸಾಮಾನ್ಯರು ಬಿಡಿ ವಿಶ್ವದ ಯಾವ ಘಟಾನುಘಟಿ ವಿಜ್ಞಾನಿಗಳಿಗೂ ಸಾಧ್ಯವಾಗಿರಲಿಲ್ಲ.

➤ ಐನ್‌ಸ್ಟೈನ್ ಅವರ ಜನಪ್ರಿಯ ಚಿತ್ರವೆಂದರೆ ಅವರು ತಮ್ಮ ನಾಲಗೆಯನ್ನು ಹೊರಗೆ ಚಾಚಿ ಪೋಸು ನೀಡಿದ್ದು. ಐನ್‌ಸ್ಟೈನ್ ಚಿಕ್ಕ ಹುಡುಗನಂತೆ ವರ್ತಿಸಿದ್ದ ಈಈ ಚಿತ್ರ ತೆಗೆದಿದ್ದು ಐನ್‌ಸ್ಟೈನ್‌ 72ನೇ ಹುಟ್ಟುಹಬ್ಬದಂದು. ಐನ್‌ಸ್ಟೀನ್‌ಗೆ ಗೌರವ ಸೂಚಿಸಲು ಪ್ರಿನ್ಸ್‌ಟನ್ ಕ್ಲಬ್‌ನಲ್ಲಿ ಸಮಾರಂಭ ಆಯೋಜನೆಯಾಗಿತ್ತು. ಅವತ್ತು ಸ್ನೇಹಿತರು, ಸಹೋದ್ಯೋಗಿಗಳೆಲ್ಲಾ ಜಮಾಯಿಸಿದ್ದರು. ಅಲ್ಲಿಯೇ ಸಾಕಷ್ಟು ಪೋಟೋಗಳಿಗೆ ಪೋಸ್ ನೀಡಿ ನಕ್ಕು ನಕ್ಕು ವಿಜ್ಞಾನಿಗೆ ಸುಸ್ತಾಗಿತ್ತು.ಪಾರ್ಟಿ ಮುಗಿದ ಬಳಿಕ ಮನೆಗೆ ಹೊರಡಲು ಸ್ನೇಹಿತರೊಬ್ಬರ ಕಾರು ಹತ್ತಿದ ಮೇಧಾವಿಯನ್ನು ಫೋಟೊಗ್ರಾಫರ್‌ಗಳು ಬಿಡಲಿಲ್ಲ. ಮತ್ತಷ್ಟು ಫೋಟೋ ತೆಗೆಯಲು ಮುಂದಾದಾಗ ನಕ್ಕು ಸುಸ್ತಾಗಿದ್ದ ಐನ್‌ಸ್ಟೈನ್‌ ನಾಲಗೆಯನ್ನು ಹೊರಗೆ ಚಾಚಿ ಪೋಸು ನೀಡಿದರು.

➤ ಐನ್ ಸ್ಟೈಲ್ ಅವರ ವಿಚಿತ್ರ ಡೆಸ್ಸಿಂಗ್ ಅವರ ಹೈಲೆಟ್ ಆಗಿತ್ತು. ಆದರೆ ಅವರ ಕೆದರಿದ ಕೂಡಲೂ ಕೂಡ ಜನರನ್ನು ಆಕರ್ಷಿಸಿದೆ. ಅಷ್ಟೇ ಅಲ್ಲ ಅವರು ಎಂದೂ ಕೂಡ ಶೂ ಧರಿಸುವಾಗ ಸಾಕ್ಸ್ ಹಾಕುತ್ತಿರಲಿಲ್ಲವಂತೆ.. ಅದೂ ಕೂಡ ಹೆಚ್ಚಿನವರನ್ನು ಆಕರ್ಷಿಸಿದೆ. ವಿಜ್ಞಾನಿ ಐನ್ ಸ್ಟೈನ್ ಅವರಿಗೆ ಸಾಕ್ಸ್ ಎಂದರೆ ಕಿರಿಕಿರಿ ಮಾಡುವ ಮತ್ತು ನೋವುಂಟು ಮಾಡುವ ವಸ್ತುವಾಗಿತ್ತಂತೆ. ಆದರೆ, ವಿಶ್ವದಲ್ಲಿ ಶೇ. 90 ಕ್ಕಿಂತ ಹೆಚ್ಚು ಜನರು ಸಾಕ್ಸ್ ಹಾಕುವುದನ್ನು ಇಷ್ಪಡುತ್ತಾರೆ.

➤ ಐನ್ ಸ್ಟೈಲ್ ಅವರಿಗೆ ಮ್ಯೂಸಿಕ್ ಅನ್ನು ಬಹಳವಾಗಿ ಇಷ್ಟಪಟ್ಟರು. ಐನ್‌ಸ್ಟೈನ್ಗೆ ವಯೋಲಿನ್ ಮತ್ತು ಸಂಗೀತ ಎಂದರೆ ಅತೀವ ಮೋಹ. ಒಂದೊಮ್ಮೆ ನಾನು ವಿಜ್ಞಾನಿಯಾಗದಿದ್ದರೆ; ಸಂಗೀತಗಾರನಾಗುತ್ತಿದ್ದೆ ಎಂದು ಸ್ವತಃ ಐನ್‌ಸ್ಟೈನ್ ಹೇಳಿಕೊಂಡಿದ್ದರು.

➤ ಐನ್ ಸ್ಟೈನ್ ಅವರು ಅವರ ಸೀನಿಯರ್ ಆಗಿದ್ದ ಲಿಯೋ ಸಿಜಾರ್ಡ್ ಅವರ ಜೊತೆಗೆ ರೆಫ್ರಿಜರೇಟರ್ ಅನ್ನು ಕೂಡ ಸಂಶೋಧನೆ ಮಾಡಿದ್ದರು. ಎರಡು ದಶಕಗಳ ನಂತರ ಅವರ ಥಿಯರಿಯನ್ನು ಅವರು ಪ್ರಕಟಿಸಿದರು. 1930 ರಲ್ಲಿ ಈ ರೆಪ್ರಿಜರೇಟರ್ ಅನ್ನು ಪೇಟೆಂಟ್ ಪಡೆಯಲಾಯಿತು.

➤ ಇಸ್ರೆಲ್ ನ ಮೊದಲ ಅಧ್ಯಕ್ಷ ಚೈಮ್ ವಿಜ್ಮನ್ ಅವರು 1952, ನವೆಂಬರ್ 9 ರಂದು ಮೃತಪಟ್ಟ ನಂತರ ಇಸ್ರೆಲ್ ನ ಎರಡನೇ ಅಧ್ಯಕ್ಷರಾಗುವಂತೆ ಅಲ್ಬರ್ಟ್ ಐನ್ ಸ್ಟೈನ್ ಅವರಿಗೆ ಆಫರ್ ಬಂದಿತ್ತು. ಆದರೆ 73 ವರ್ಷದವರಾಗಿದ್ದ ಐನ್ ಸ್ಟೈನ್ ನಾಜೂಕಿನಿಂದಲೇ ಅವರಿಗೆ ಬಂದ ಆಫರ್ ನ್ನು ನಿರಾಕರಿಸಿದ್ದರು.

 

The post ವಿಜ್ಞಾನಿ ಪರಿಚಯ : ಅಲ್ಬರ್ಟ್ ಐನ್‍ಸ್ಟೈನ್ appeared first on Current Affairs Kannada.

]]>
https://currentaffairskannada.com/albert-einstein/feed/ 0