Major crops grown in India

ಭಾರತದ ಪ್ರಮುಖ ಬೆಳೆಗಳ ಕುರಿತ ಮಾಹಿತಿ

ಭಾರತದಲ್ಲಿ ಬೆಳೆಗಳನ್ನು ಎರಡು ವಿಧಗಳಾಗಿ ವಿಂಗಡಿಸಿದ್ದಾರೆ.
1.ಆಹಾರದ ಬೆಳೆಗಳು
2.ವಾಣಿಜ್ಯ ಬೆಳೆಗಳು
1.ಆಹಾರದ ಬೆಳೆಗಳು
✦ ಪ್ರಮುಖ ಆಹಾರ ಬೆಳೆಗಳೆಂದರೆ- ಭತ್ತ, ಗೋಧಿ,ರಾಗಿ, ಜೋಳ, ತರಕಾರಿ, ಹಣ್ಣುಗಳು, ದ್ವಿದಳ ಧಾನ್ಯಗಳು.

ಭತ್ತ –
✦ಭತ್ತವು ಭಾರತದ ಜನರ ಪ್ರಮುಖ ಆಹಾರ ಧಾನ್ಯವಾಗಿದೆ.
✦ಭಾರತವು ಪ್ರಪಂಚದಲ್ಲಿ ಅತಿ ಹೆಚ್ಚು ಭತ್ತದ ಕ್ಷೇತ್ರವನ್ನು ಹೊಂದಿದ್ದು, ಉತ್ಪಾದನೆಯಲ್ಲಿ ಎರಡನೆಯ ಸ್ಥಾನವನ್ನು ಹೊಂದಿದೆ. ಚೀನಾ ಮೊದಲ ಸ್ಥಾನದಲ್ಲಿದೆ.
✦ಭತ್ತವು ಮುಖ್ಯವಾಗಿ “ಖಾರಿಫ್ ಬೆಳೆಯಾಗಿದ್ದು, ನೀರಾವರಿ ಪ್ರದೇಶಗಳಲ್ಲಿ “ರಾಬಿ” ಕಾಲದಲ್ಲಿಯೂ ಬೆಳೆಯುತ್ತಾರೆ.
✦ಭತ್ತವು ಉಷ್ಣವಲಯದ ಬೆಳೆಯಾಗಿದ್ದು, 25 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಮತ್ತು 100ರಿಂದ 200 ಸಂ.ಮೀ ವಾರ್ಷಿಕ ಮಳೆಯ ಅವಶ್ಯಕತೆ ಇದೆ.
✦ಫಲವತ್ತಾದ ಮೆಕ್ಕಲು ಮಣ್ಣು ಮತ್ತು ಜೇಡಿಮಣ್ಣು ಭತ್ತದ ಬೆಳೆಗೆ ಸೂಕ್ತವಾಗಿರುತ್ತವೆ.
✦ಬೆಳೆಯು ಕೊಯ್ಲಿಗೆ ಬರುವವರೆಗೂ ಪೈರಿನ ತಳದಲ್ಲಿ ನೀರು ನಿಂತಿರಬೇಕಾದುದರಿಂದ ಸಮತಟ್ಟಾದ ಭೂಮಿ ಬೇಕಾಗುತ್ತದೆ.
✦ಪಶ್ಚಿಮ ಬಂಗಾಳವು ಭಾರತದಲ್ಲಿ ಹೆಚ್ಚು ಭತ್ತವನ್ನು ಬೆಳೆಯುವ ರಾಜ್ಯವಾಗಿದೆ.

ಗೋಧಿ
✦ ಭಾರತವು ಉತ್ಪಾದಿಸುತ್ತಿರುವ ಆಹಾರ ಧಾನ್ಯಗಳಲ್ಲಿ ಕ್ಷೇತ್ರ ಮತ್ತು ಉತ್ಪಾದನೆಗಳೆರಡರಲ್ಲಿಯೂ ಗೋಧಿಯು ಎರಡನೆ ಸ್ಥಾನ ಪಡೆದಿದೆ.
✦ ಇದು ಭಾರತದ ಮುಖ್ಯ ರಾಬಿ ಬೆಳೆಯಾಗಿದೆ.
✦ ಗೋಧಿ ಬೆಳೆಗೆ 10ಡಿಗ್ರಿಯಿಂದ 15 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ, 50 ರಿಂದ 70 ಸಂ.ಮೀ. ವಾರ್ಷಿಕ ಮಳೆ ಅವಶ್ಯಕ.
✦ ಜೇಡಿಮಣ್ಣು ಮತ್ತು ಕಪ್ಪು ಮಣ್ಣಿನಲ್ಲಿ ಚೆನ್ನಾಗಿ ಗೋಧಿಯು ಬೆಳೆಯುತ್ತದೆ.
✦ ಉತ್ತರದ ಮೈದಾನಗಳಾದ ಪಂಜಾಬ್,ಹರಿಯಾಣ ಮತ್ತು ಉತ್ತರಪ್ರದೇಶಗಳಲ್ಲಿ ಗೋಧಿಯನ್ನು ಹೆಚ್ಚಾಗಿ ಬೆಳೆಯುತ್ತಾರೆ. ಪಂಜಾಬ್ ಗೋಧಿಯ ಕಣಜ” ವೆನಿಸಿದೆ.
✦ ಭಾರತದಲ್ಲಿ ‘ಹಸಿರು ಕ್ರಾಂತಿಯುಗಕ್ಕೆ ನಾಂದಿಯಾದುದು ಗೋಧಿಯ ಅಧಿಕ ಇಳುವರಿಯ ತಳಿಗಳಿಂದ.

ಜೋಳ
✦ ಇದು “ಖಾರಿಫ್ ಬೆಳೆಯಾಗಿದೆ.
✦ ಇದನ್ನು ಮಧ್ಯ ಮತ್ತು ದಕ್ಷಿಣ ಭಾರತದ ಒಣಹವೆಯಿರುವ ಪ್ರದೇಶಗಳಲ್ಲಿ ಬೆಳೆಯುತ್ತಾರೆ.
✦ ಈ ಬೆಳೆಗೆ ಹೆಚ್ಚು ಉಷ್ಣಾಂಶ ಮತ್ತು ಸಾಧಾರಣ ಮಳೆ ಬೇಕಾಗುತ್ತದೆ.
✦ ಕಪ್ಪು ಮಣ್ಣಿನಲ್ಲಿ ಇದು ಚೆನ್ನಾಗಿ ಬೆಳೆಯುತ್ತದೆ.
✦ ಕರ್ನಾಟಕ, ಮಹಾರಾಷ್ಟ್ರ, ಮತ್ತು ಮಧ್ಯಪ್ರದೇಶಗಳು ಜೋಳವನ್ನು ಉತ್ಪಾದಿಸುವ ಪ್ರಮುಖ ರಾಜ್ಯಗಳು.

ರಾಗಿ
✦ ರಾಗಿಯು ಹೆಚ್ಚು ಪೋಷಕಾಂಶವನ್ನು ಹೊಂದಿರುವ ಆಹಾರ ಧಾನ್ಯವಾಗಿದೆ.
✦ ಇದನ್ನು ಕಡಿಮೆ ಮಳೆ ಮತ್ತು ಕಡಿಮೆ ಭೂಸಾರ ಇರುವ ಮಣ್ಣಿನಲ್ಲೊ ಒಣ ಬೆಳೆಯಾಗಿ ಬೆಳೆಯಲಾಗುತ್ತದೆ.
✦ ಇದನ್ನು ಕರ್ನಾಟಕ, ತಮಿಳುನಾಡು, ಮತ್ತು ಆಂಧ್ರಪ್ರದೇಶಗಳಲ್ಲಿ ಹೆಚ್ಚು ಬೆಳೆಯುತ್ತಿದ್ದು ಇಲ್ಲಿನ ಜನರ ಮುಖ್ಯ ಆಹಾರ ಬೆಳಯಾಗಿದೆ.
✦ ಇದೊಂದು ಪ್ರಮುಖ ಖಾರಿಫ್ ಬೆಳೆಯಾಗಿದೆ.
✦ ಉತ್ರ ಕರ್ನಾಟಕದಲ್ಲಿ ‘ಜೋಳ’ ಮತ್ತು ದಕ್ಷಿಣ ಕರ್ನಾಟಕದಲ್ಲಿ ‘ರಾಗಿ’ ಅತಿ ಮುಖ್ಯ ಆಹಾರ ಧಾನ್ಯಗಳಾಗಿವೆ.

ದ್ವಿದಳ ಧಾನ್ಯಗಳು
ಭಾರತದಲ್ಲಿ ಬೆಳೆಯುವ ಪ್ರಮುಖ ದ್ವಿದಳಧಾನ್ಯಗಳೆಂದರೆ – ಹೆಸರು, ಉದ್ದು, ಹುರುಳಿ, ಕಡಲೆ, ತೊಗರಿ ಮುಂತಾದವು. ಇವು ಪ್ರೋಟಿನ್ಯುಕ್ತ ಧಾನ್ಯವಾಗಿದೆ.
✦ ಈ ಬೆಳೆಗಳು ಮಣ್ಣಿನ ಫಲವತ್ತತೆಯನ್ನು ಕಾಪಾಡುತ್ತದೆ. ಆದ್ದರಿಂದ ಇತರ ಬೆಳೆಗಳ ಜೊತೆಯಲ್ಲಿ ಇಲ್ಲವೇ ಬೆಳೆಗಳ ಆವರ್ತದ ಕ್ರಮದಲ್ಲಿ ಬೆಳೆಯುತ್ತಾರೆ.
✦ ರಾಜಸ್ತಾನವು ಧಾನ್ಯಗಳ ಉತ್ಪಾದನೆಯಲ್ಲಿ ಮೊದಲ ಸ್ಥಾನವನ್ನು ಹೊಂದಿದ್ದು, ನಂತರದ ಸ್ಥಾನದಲ್ಲಿ “ ಕರ್ನಾಟಕವಿದೆ.

ಮೆಕ್ಕೆಜೋಳ
✦ ಇದನ್ನು ಉಪ ಆಹಾರ ಧಾನ್ಯವಾಗಿ ಮತ್ತು ದನಕರುಗಳ ಮೇವಿಗಾಗಿ ಬಳಸುತ್ತಾರೆ.
✦ ಇದು ಹೆಚ್ಚು ಇಳುವರಿಯನ್ನು ಕೊಡುವ “ಖಾರೀಫ್” ಬೆಳೆಯಾಗಿದೆ.
✦ ಇದನ್ನು ಬಿಹಾರ, ರಾಜಸ್ಥಾನ, ಮಧ್ಯಪ್ರದೇಶ, ಗುಜರಾತ್, ಹಿಮಾಚಲ ಪ್ರದೇಶ, ಆಂದ್ರಪ್ರದೇಶ, ಉತ್ತರಪ್ರದೇಶ, ಕರ್ನಾಟಕ, ರಾಜ್ಯಗಳಲ್ಲಿ ಬೆಳೆಯುತ್ತಾರೆ.

ನವಣೆ
✦ ನವಣೆಯನ್ನು ಕಡಿಮೆ ಮಳೆಬೀಳುವ ಮತ್ತು ಭೂಸಾರ ಕಡಿಮೆ ಇರುವ ಭಾಗಗಳಲ್ಲಿ ಬೆಳೆಯುತ್ತಾರೆ.

ವಾಣಿಜ್ಯ ಬೆಳೆಗಳು
ಕಬ್ಬು, ಹತ್ತಿ, ಸೆಣಬು, ಚಹ, ಕಾಫಿ, ಎಣ್ಣೆಕಾಳುಗಳು, ಹೊಗೆಸೊಪ್ಪು, ಮತ್ತು ಸಾಂಬಾಋ ಪದಾರ್ಥಗಳು

ಕಬ್ಬು
✦ ಇದು ಭಾರತದ ಪ್ರಮುಖ ವಾಣಿಜ್ಯ ಬೆಳೆಯಾಗಿದೆ.
✦ ಪ್ರಪಂಚದಲ್ಲೇ ಕಬ್ಬಿನ ಉತ್ಪಾದನೆಯಲ್ಲಿ ಭಾರತ ಎರಡನೇ ಸ್ಥಾನ ಪಡೆದಿದೆ.
✦ ಕಬ್ಬನ್ನು ಸಕ್ಕರೆ, ಬೆಲ್ಲ ಹಾಗೂ ಕಾಗದ ಕೈಗಾರಿಕೆಗಳಲ್ಲಿ ಕಚ್ಚಾವಸ್ತುವನ್ನಾಗಿ ಬಳಸಲಾಗುತ್ತದೆ.
✦ ಈ ಬೆಳೆಗೆ ಹೆಚ್ಚು ಉಷ್ಣಾಂಶ ಮತ್ತು ತೇವಾಂಶ ಹೊಂದಿರುವ ವಾಯುಗುಣ ಅವಶ್ಯಕ. ಇದಕ್ಕೆ 21 ಡಿಗ್ರಿ ಯಿಂದ 26 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ, 100 ರಿಂದ 150 ಸೆಂ.ಮೀ ವಾರ್ಷಿಕ ಮಳೆ ಬೇಕಾಗುವುದು.
✦ ಈ ಬೆಳೆಯು ಮೆಕ್ಕಲು ಮತ್ತು ಕಪ್ಪುಮಣ್ಣಿನಲ್ಲಿ ಚೆನ್ನಾಗಿ ಬೆಳೆಯುತ್ತದೆ.
✦ ಉತ್ತರ ಪ್ರದೇಶ ಭಾರತದಲ್ಲಿ ಅತಿಹೆಚ್ಚು ಕಬ್ಬನ್ನು ಉತ್ಪಾದಿಸುವ ರಾಜ್ಯವಾಗಿದೆ.
✦ ದಕ್ಷಿಣ ಭಾರತದಲ್ಲಿ ಕಬ್ಬಿನ ಇಳುವರಿ ಉತ್ತರ ಭಾರತಕ್ಕಿಂತ ಹೆಚ್ಚಾಗಿದೆ.

ಚಹ ಮತ್ತು ಕಾಫಿ,
✦ ಚಹ ಮತ್ತು ಕಾಫಿ ಭಾರತದ ಪಾನೀಯ ಬೆಳೆಗಳಾಗಿವೆ.
✦ ಭಾರತವು ಪ್ರಪಂಚದಲ್ಲೇ ಅತಿ ಹೆಚ್ಚು “ಚಹಾ” ವನ್ನು ಉತ್ಪಾದಿಸುವ ದೇಶವಾಗಿದೆ.
✦ ಚಹಾ ಮತ್ತು ಕಾಫಿ ಬೆಳೆಗಳು ಒಂದೇ ವಿಧೌಆದ ವಾಯುಗುಣ ಮತ್ತು ಭೂಗುಣಗಳಲ್ಲಿ ಬೆಳೆಯುತ್ತವೆ.
✦ ಇವುಗಳಿಗೆ 15 ಡಿಗ್ರಿ ಯಿಂದ 30ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಅವಶ್ಯಕ. ಹಾಗೂ 150 ರಿಂದ 200 ಸೆಂ.ಮೀ ವಾರ್ಷಿಕ ಮಳೆ ಅವಶ್ಯಕ.
✦ ಎರಡಕ್ಕೂ ನೀರು ಚೆನ್ನಾಗಿ ಹರಿದುಹೋಗುವ ಇಳಿಜಾರು ಪ್ರದೇಶ ಮತ್ತು ಸಾವಯವ ಪದಾರ್ಥಗಳಿಂದ ಕೂಡಿದ ಫಲವತ್ತಾದ ಅಣ್ಣು ಅವಶ್ಯಕ.
✦ ಭಾರತದ ಅಸ್ಸಾಂನಲ್ಲಿ ವ್ಯಾಪಕವಾಗಿ “ಚಹ”ವನ್ನು ಬೆಳೆಯಲಾಗುತ್ತದೆ. ಜೊತೆಗೆ ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು, ಕರ್ನಾಟಕಗಳಲ್ಲಿಯೂ ಚಹವನ್ನು ಬೆಳೆಯುತ್ತಾರೆ.
✦ ಪಶ್ಚಿಮ ಬಂಗಾಳದ ದಾರ್ಜಿಲಿಂಗ್ನ ಚಹ ಪ್ರಪಂಚದಲ್ಲಿಯೇ ಅತ್ಯುತ್ತಮ ದರ್ಜೆಯಾಗಿದೆ.
✦ ಕರ್ನಾಟಕ ರಾಜ್ಯವು ಭಾರತದಲ್ಲಯೇ ಅತಿ ಹೆಚ್ಚು ಕಾಫಿಯನ್ನು ಉತ್ಪಾದಿಸುವ ರಾಜ್ಯವಾಗಿದೆ. ಕರ್ನಾಟಕದ ಪಶ್ಚಿಮ ಘಟ್ಟಗಳ ದಕ್ಷಿಣ ಭಾಗ ಕಾಫಿ ಬೆಳೆಗೆ ಅನುಕೂಲವಾಗಿದೆ.
✦ ಭಾರತವು ಚಹವನ್ನು ರಪ್ತು ಮಾಡುವ ಪ್ರಮುಖ ದೇಶವಾಘಿದೆ.

ಹತ್ತಿ
✦ ಇದು ಭಾರತದ ಪ್ರಮುಖ ನಾರು ಬೆಳೆಯಾಗಿದೆ.
✦ ಭಾರತವು ಹತ್ತಿ ಬೆಳೆಯುವ ಪ್ರದೇಶದಲ್ಲಿ ಪ್ರಪಂಚದಲ್ಲಿ ಮೊದಲ ಹಾಗೂ ಉತ್ಪಾದನೆಯಲ್ಲಿ ಎರಡನೆ ಸ್ಥಾನದಲ್ಲಿದೆ.
✦ ಹತ್ತಿ ಉಷ್ಣವಲಯದ ಬೆಳೆಯಾಗಿದೆ. ಈ ಬೆಳೆಗೆ 20 ಡಿಗ್ರಿ ರಿಂದ 25 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿರಬೇಕು.
✦ ಇದು ಚೆನ್ನಾಗಿ ನೀರು ಇಂಗುವ ಕೆಂಪು ಮಣ್ಣು, ಕಪ್ಪು ಮಣ್ಣು ಮತ್ತು ಮೆಕ್ಕಲು ಮಣ್ಣುಗಳಲ್ಲಿ ಚೆನ್ನಾಗಿ ಬೆಳೆಯುವುದು.
✦ ಇದು ಖಾರೀಫ್ ಹಾಗೂ ರಾಬಿ ಬೆಳೆಯಾಗಿದೆ.
✦ ಭಾರತದಲ್ಲಿ ಹೆಚ್ಚಾಗಿ ಮಧ್ಯಮ ಮತ್ತು ತುಂಡು ಎಳೆಯ ಹತ್ತಿಯನ್ನು ಉತ್ಪಾದಿಸಲಾಗುತ್ತದೆ.
✦ ಉದ್ದ ಎಳೆಯ ಹತ್ತಿಯನ್ನು ಇತ್ತೀಚೆಗೆ ನೀರಾವರಿ ಸಹಾಯದಿಂದ ಬೆಳೆಯಲಾಗುತ್ತಿದೆ.( ಪಂಜಾಬ್, ಹರಿಯಾಣ, ರಾಜಸ್ಥಾನ, ತಮಿಳುನಾಡು, ಉತ್ತರಪ್ರದೇಶ)
✦ ಹತ್ತಿ ಉತ್ಪಾದಿಸುವ ಪ್ರಮುಖ ರಾಜ್ಯಗಳು- ಮಹಾರಾಷ್ಟ್ರ, ಗುಜರಾತ್, ಆಂಧ್ರಪ್ರದೇಶ, ಪಂಜಾಬ್ ಹರಿಯಾಣ, ರಾಜಸ್ತಾನ, ಕರ್ನಾಟಕ, ಮತ್ತು ಉತ್ತರಪ್ರದೇಶ.
✦ ಕಚ್ಚಾ ಹತ್ತಿಯನ್ನು ಗಿರಣಿಗಳಲ್ಲಿ ಕಚ್ಚಾ ವಸ್ತುವಾಗಿ ಬಳಸುವುದಲ್ಲದೆ, ಅದಿಕ ಪ್ರಮಾಣದ ಹತ್ತಿಯನ್ನು ರಪ್ತು ಮಾಡಿ ವಿದೇಶಿ ವಿನಿಮಯ ಗಳಿಸಬಹುದು. ಆದುದರಿಂದಲೇ ಹತ್ತಿಯನ್ನು “ ಬಿಳಿಚಿನ್ನ” ಎಂದು ಕರೆಯುತ್ತಾರೆ.

ಸೆಣಬು
✦ ಸೆಣಬು ಹತ್ತಿಯ ನಂತರ ಎರಡನೆಯ ಸ್ಥಾನ ಪಡೆದಿರುವ ಪ್ರಮುಖ ನಾರು ಬೆಳೆಯಾಗಿದೆ.
✦ ಸೆಣಬು ಬೆಚ್ಚನೆಯ ಹಾಗೂ ತೇವಯುತವಾದ ವಾಯುಗುಣದಲ್ಲಿ ಬೆಳೆಯುತ್ತದೆ.
✦ ಸೆಣಬಿನ ಬೇಸಾಯಕ್ಕೆ 25 ಡಿಗ್ರಿ ಯಿಂದ 35 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಮತ್ತು 150 ಸೆಂ.ಮೀಗಿಂತಲೂ ಹೆಚ್ಚು ವಾರ್ಷಿಕ ಮಳೆ ಬೇಕಾಗುವುದು.
✦ ಮರಳು ಮಿಶ್ರಿತ ಜೇಡಿಮಣ್ಣು ಮತ್ತು ಮೆಕ್ಕಲುಮಣ್ಣು ಈ ಬೆಳೆಗೆ ಅತ್ಯಂತ ಸೂಕ್ತ.
✦ ಈ ಬೆಳೆಗೆ ಅಧಿಕ ಪ್ರಮಾಣದಲ್ಲಿ ನೀರು ಮತ್ತು ಹೆಚ್ಚು ಕೆಲಸಗಾರರು ಬೇಕಾಗುತ್ತಾರೆ.
✦ ಪಶ್ಚಿಮ ಬಂಗಾಳವು ಭಾರತದಲ್ಲಯೇ ಅತಿ ಹೆಚ್ಚು ಸೆಣಬನ್ನು ಉತ್ಪಾದಿಸುವ ರಾಜ್ಯವಾಗಿದೆ.
✦ ಅಸ್ಸಾಂ, ಉತ್ತರಪ್ರದೇಶ ಬಿಹಾರ, ಒರಿಸ್ಸಾ, ಮತ್ತು ತ್ರಿಪುರ ಇವು ಸೆಣಬನ್ನು ಉತ್ಪಾದಿಸುವ ಪ್ರಮುಖ ರಾಜ್ಯಗಳಾಗಿವೆ.
✦ ಸೆಣಬನ್ನು “ ಚಿನ್ನದ ಎಳೆ” ಎಂದು ಕರೆಯುತ್ತಾರೆ.
✦ ಭಾರತದ ವಿಭಜನೆಯಿಂದ ಸೆಣಬು ಬೆಳೆಯುವ ಹೆಚ್ಚು ಪ್ರದೇಶಗಳು ಅಂದಿನ ಪೂರ್ವ ಪಾಕಿಸ್ತಾನಕ್ಕೆ ( ಬಾಂಗ್ಲಾದೇಶ) ಕ್ಕೆ ಸೇರಿಹೋದವು.

ಹೊಗೆಸೊಪ್ಪು
✦ ಇದು ನಿಕೋಟಿನ್ ವರ್ಗಕ್ಕೆ ಸೇರಿದ ಸಸ್ಯ. ಈ ಬೆಳೆಯನ್ನು 16 ನೆ ಶತಮಾನದಲ್ಲಿ ಪೋರ್ಚುಗೀಸರು ಭಾರತಕ್ಕೆ ಪರಿಚಯಿಸಿದರೆಂದು ತಿಳಿಯಲಾಗಿದೆ.
✦ ಆರಂಭದಲ್ಲಿ ಇದನ್ನು ಗೋವಾ, ಕರ್ನಾಟಕ ಮತ್ತು ಗುಜರಾತ್ ರಾಜ್ಯಗಳಲ್ಲಿ ಬೆಳೆಯುತ್ತಿದ್ದರು. ನಂತರ ಆಂಧ್ರಪ್ರದೇಶ ಕರ್ನಾಟಕ, ತಮಿಳುನಾಡು, ಅಸ್ಸಾಂ, ಬಿಹಾರ, ಮಹಾರಾಷ್ಟ್ರ, ರಾಜಸ್ತಾನ, ಉತ್ತರಪ್ರದೇಶಗಳಲ್ಲಿ ಇದನ್ನು ಬೆಳೆಯಲಾರಂಭಿಸಿದರು.
✦ ಆಂಧ್ರಪ್ರದೇಶ ಮತ್ತು ಉತ್ತರ ಪ್ರದೇಶ ಹೊಗೆಸೊಪ್ಪನ್ನು ಉತ್ಪಾದಿಸುವ ಪ್ರಮುಖ ರಾಜ್ಯವಾಗಿದೆ.

ಎಣ್ಣೆಕಾಳುಗಳು
✦ ಭಾರತದಲ್ಲಿ ಬೆಳೆಯುವ ಪ್ರಮುಖ ಎಣ್ಣೆಕಾಳುಗಳೆಂದರೆ- ಕಡಲೆಕಾಯಿ (ಶೇಂಗಾ), ಎಳ್ಳು, ಕುಸುಬೆ, ಸಾಸಿವೆ, ಅಗಸೆ, ಔಡಲ( ಹರಳು) ಮುಂತಾದವು.
✦ ತಾಳೆ ಮತ್ತು ತೆಂಗಿನಿಂದಲೂ ಎಣ್ಣೆ ತೆಗೆಯಲಾಗುತ್ತದೆ.

ಇತರ ವಾಣಿಜ್ಯ ಬೆಳೆಗಳು- ಕೋಕೋ, ಮೆಣಸು, ಏಲಕ್ಕಿ, ಲವಂಗ, ಗೋಡಂಬಿ, ಅರಿಸಿನ, ಶುಂಠಿ, ಮತ್ತು ರಬ್ಬರ್.ನೀಲಗೀರಿ ಬೆಟ್ಟಗಳ ಇಳಿಜಾರಿನಲ್ಲಿ ಕೋಕೋ, ಪಶ್ಚಿಮ ಘಟ್ಟಗಳ ತೇವಾಂಶವುಳ್ಳ ಇಳಿಜಾರುಗಳಲ್ಲಿ ಸಾಬಾರ ಪದಾರ್ಥಗಳನ್ನು ಬೆಳೆಯುತ್ತಾರೆ. ರಬ್ಬರ್ ತೋಟಗಳು ಕೇರಳ, ಅಸ್ಸಾಂ, ಕರ್ನಾಟಕ, ಮತ್ತು ತಮಿಳುನಾಡುಗಳಲ್ಲಿ ಕಂಡುಬರುತ್ತವೆ.

Comments

No comments yet. Why don’t you start the discussion?

Leave a Reply

Your email address will not be published. Required fields are marked *